6
  • Latest
ಬಸ್ ಅವ್ಯವಸ್ಥೆ: ಹೈರಾಣಾದ ಮಲವಳ್ಳಿಯ ಜನತೆ

ಬಸ್ ಅವ್ಯವಸ್ಥೆ: ಹೈರಾಣಾದ ಮಲವಳ್ಳಿಯ ಜನತೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಸ್ ಅವ್ಯವಸ್ಥೆ: ಹೈರಾಣಾದ ಮಲವಳ್ಳಿಯ ಜನತೆ

ಶ್ರೀ ನ್ಯೂಸ್ by ಶ್ರೀ ನ್ಯೂಸ್
August 3, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ ತಾಲೂಕಿನ ಮಲವಳ್ಳಿ ಬಾರೆ ಭಾಗದಲ್ಲಿ ಬಸ್ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾ.ಪಂ ವ್ಯಾಪ್ತಿಯ ಐದು ಗ್ರಾಮಗಳಿಗೆ ಕೇವಲ ಒಂದೇಒಂದು ಬಸ್ ಮಾರ್ಗ ನೀಡಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಮಹಿಳೆಯರು, ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ಬಸ್ ಏರಲಾರದ ಪರಿಸ್ಥಿತಿ ಉಂಟಾಗಿದೆ.

ADVERTISEMENT
ADVERTISEMENT

ಬಹುತೇಕ ದಿನಗಳಲ್ಲಿ ವಾಗಳ್ಳಿ, ಬಾಸಲ್ ಭಾಗದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾರದೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಸಾಧ್ಯವಾಗದೇ ಶಿಕ್ಷಣದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ.

Advertisement. Scroll to continue reading.

ಹದಗೆಟ್ಟ ರಸ್ತೆ ಮತ್ತು ಬಸ್ಸುಗಳ ನಿರ್ವಹಣೆಯ ಕೊರತೆಯಿಂದಾಗಿ ಬಸ್ ಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಕಳೆದ ಸುಮಾರು ಹತ್ತು ದಿನಗಳಲ್ಲಿ 5 ಬಾರಿ ಮಲವಳ್ಳಿ ಮಾರ್ಗದ ಬಸ್ ಗಳು ಹಾಳಾಗಿವೆ. ಸಾರಿಗೆ ಸಂಸ್ಥೆ ಗುತ್ತಿಗೆ ಅಧಾರದಲ್ಲಿ ಖಾಸಗಿ ಡ್ರೈವರ್ ಗಳನ್ನು ನೇಮಿಸಿಕೊಂಡಿದ್ದು ಅಂತಹ ಚಾಲಕರು ನಿಷ್ಕಾಳಜಿ ಮತ್ತು ಅತೀವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದಾರೆ. ಕೆಲವೊಮ್ಮೆ ವಿವಿಧ ಕಾರಣ ಹೇಳಿ ಅರ್ಧಮಾರ್ಗದಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಾರೆ.

ಹೀಗೆ ಬಸ್ ನ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದ ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ವಿದ್ಯಾರ್ಥಿಗಳು ಆಗಸ್ಟ್ 4 ರಂದು ಬಸ್ ತಡೆದು ಪ್ರತಿಭಟನೆ ನಡೆಸಲು ನಿರ್ಣಯಿಸಿದ್ದರು. ಇದನ್ನು ತಿಳಿದ ಬಸ್ ಘಟಕದ ಅಧಿಕಾರಿಗಳು ಪ್ರತಿಭಟನೆ ನಡೆಸದಂತೆ ವಿನಂತಿಸಿ, ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ, ಸಮಸ್ಯೆ ಆಲಿಸಿದರು. ಸ್ಥಳೀಯರಾದ ಗಣಪತಿ ಗಾಂವ್ಕಾರ ವಾಗಳ್ಳಿ ಮತ್ತು ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯ ಸುಧಾರಣೆ ಕುರಿತು ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಅವ್ಯವಸ್ಥೆ ಸರಿಪಡಿಸಲು ಮಲವಳ್ಳಿ, ಬೇಣದಗುಳೇ ಮಾರ್ಗಕ್ಕೆ ಒಂದು, ಬಾರೆ, ಶಿಗೇಕೇರಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಇನ್ನೊಂದು ವಸತಿ ಬಸ್ ಒದಗಿಸಬೇಕು. ಶಿಗೇಕೇರಿ ಮಾರ್ಗದ ವಸತಿ ಬಸ್ಸನ್ನು ಬಂಕೊಳ್ಳಿಯವರೆಗೆ ಮುಂದುವರೆಸಬೇಕು. ಹೋಗುವ ಡ್ರೈವರ್, ಕಂಡಕ್ಟರ್ ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಯಲ್ಲಾಪುರದಿಂದ ಸುಮಾರು 56 ಕಿ.ಮೀ. ದೂರದ ಮಾರ್ಗವಾಗಿದ್ದರಿಂದ ಸುಸ್ಥಿತಿಯಲ್ಲಿರುವ ಬಸ್ ಗಳನ್ನೇ ನೀಡಬೇಕು ಎಂಬ ಬೇಡಿಕೆಯನ್ನು ಅಧಿಕಾರಿಗಳ‌ ಮುಂದೆ ಇಡಲಾಯಿತು.

ಇಷ್ಟೆಲ್ಲ ಬೇಡಿಕೆಗಳನ್ನು ಕೇಳಿದ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿ ಹೋದರು.

Advertisement. Scroll to continue reading.

ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ, ಸದಸ್ಯರಾದ ದೀಪಕ ಭಟ್ಟ ಮಹಾಬಲೇಶ್ವರ ಭಟ್ಟ ಹಲ್ಗುಮನೆ, ಪಾರ್ವತಿ ಭಟ್ಟ, ರಂಜನಾ ಹುಲಸ್ವಾರ, ರಾಘವೇಂದ್ರ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ, ಸದಸ್ಯ ಟಿ, ಸಿ, ಗಾಂವ್ಕಾರ, ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸದಾನಂದ ಭಟ್ಟ, ಯುವಕ ಸಂಘದ ಶ್ರೀರಾಮ ಭಟ್ಟ, ಗ್ರಾಮಸ್ಥರಾದ ರಾದ ವಿ. ಪಿ. ಹೆಬ್ಬಾರ್, ಪ್ರಸನ್ನ ಗಾಂವ್ಕಾರ, ಶಂಕರನಾರಾಯಣ ಭಟ್ಟ, ಶ್ರೀಪಾದ ಭಟ್ಟ, ಚಂದ್ರಕಾಂತ ಮರಾಠಿ, ತ್ರಯಂಬಕ ಹೆಗಡೆ, ಗ್ರಾ. ಪ. ಅಭಿವೃದ್ಧಿ ಅಧಿಕಾರಿ ಗಂಗಾಧರ ಭಟ್ಟ ಭಾಗವಹಿಸಿದ್ದರು.

 

ShareSendTweetShare
ADVERTISEMENT
Previous Post

ಗದ್ದೆಯಲ್ಲಿ ನಾಟಿಯ ಪಾಠ

Next Post

ಸಿಂಚನಾಗೆ ಶ್ರೀಮಾತಾ ಸೊಸೈಟಿಯಿಂದ ಬೀಳ್ಕೊಡುಗೆ

Next Post
ಸಿಂಚನಾಗೆ ಶ್ರೀಮಾತಾ ಸೊಸೈಟಿಯಿಂದ ಬೀಳ್ಕೊಡುಗೆ

ಸಿಂಚನಾಗೆ ಶ್ರೀಮಾತಾ ಸೊಸೈಟಿಯಿಂದ ಬೀಳ್ಕೊಡುಗೆ

ಡಬ್ಗುಳಿಯಲ್ಲಿ ಪಕ್ಷಿ ವೈವಿಧ್ಯತೆಯ ಸಮಗ್ರ ಅಧ್ಯಯನ

ಡಬ್ಗುಳಿಯಲ್ಲಿ ಪಕ್ಷಿ ವೈವಿಧ್ಯತೆಯ ಸಮಗ್ರ ಅಧ್ಯಯನ

ಕೋಲು ಕೊಟ್ಟು ಪೆಟ್ಟು ತಿಂದ ಖಾಸಗಿ ವಾಹಿನಿ

ಕೋಲು ಕೊಟ್ಟು ಪೆಟ್ಟು ತಿಂದ ಖಾಸಗಿ ವಾಹಿನಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.