6
  • Latest
ಅಧಿಕಾರಿಗಳ ತಪ್ಪಿಗೆ ರೈತರಿಗೆ ಶಿಕ್ಷೆ: ಬೆಳೆ ವಿಮೆಯಿಂದ ವಂಚಿತರಾಗುತ್ತಿರುವ ರೈತರು

ಅಧಿಕಾರಿಗಳ ತಪ್ಪಿಗೆ ರೈತರಿಗೆ ಶಿಕ್ಷೆ: ಬೆಳೆ ವಿಮೆಯಿಂದ ವಂಚಿತರಾಗುತ್ತಿರುವ ರೈತರು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಧಿಕಾರಿಗಳ ತಪ್ಪಿಗೆ ರೈತರಿಗೆ ಶಿಕ್ಷೆ: ಬೆಳೆ ವಿಮೆಯಿಂದ ವಂಚಿತರಾಗುತ್ತಿರುವ ರೈತರು

ಶ್ರೀ ನ್ಯೂಸ್ by ಶ್ರೀ ನ್ಯೂಸ್
August 27, 2025
in ಸ್ಥಳೀಯ
advt advt advt
ADVERTISEMENT

ಅಕಾಲಿಕ ಮಳೆ , ಕೊಳೆ ರೋಗ , ಪ್ರಾಣಿಗಳಿಂದ ಬಾಧೆ…ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನ ಹಾಗೂ ಸರ್ಕಾರದ ಕುರುಡುತನದಿಂದ ಮತ್ತೊಂದು ಪೆಟ್ಟು ಬಿದ್ದಿದೆ.

ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಕೃಷಿಕರು ಭತ್ತ , ಅಡಿಕೆ ,ತೆಂಗು, ಜೋಳ, ಹತ್ತಿ,ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾರೆ. ಅಕಾಲಿಕ ಮಳೆ ಹಾಗೂ ಪ್ರಕೃತಿ ಮುನಿಸಿನಿಂದ ರೈತರಿಗೆ ಬೆಳೆ ನಷ್ಟವಾದರೂ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹವಮಾನ ಆಧಾರಿತ ಬೆಳೆ ವಿಮೆ( ಫಸಲ್ ಭಿಮಾ) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ತಾಂತ್ರಿಕ ಕಾರಣದಿಂದ ಬೆಳೆ ವಿಮೆ ತುಂಬಲು ಸಾಧ್ಯವಾಗದ ಕಾರಣ, ಹಲವು ರೈತರಿಗೆ ವಿಮಾ ಸೌಲಭ್ಯವೇ ಇಲ್ಲದಂತಾಗಿದೆ. ಹಲವಾರು ರೈತರು ಕಂಗಾಲಾಗಿದ್ದಾರೆ.

ADVERTISEMENT
ADVERTISEMENT

ತಾಲೂಕಿನಲ್ಲಿ ಬೆಳೆಸಾಲ ಪಡೆದ ರೈತರ ವಿಮಾ ಹಣವನ್ನು ಸ್ಥಳೀಯ ಸಹಕಾರಿ ಸಂಘಗಳೇ ರೈತರ ಖಾತೆಗೆ ಖರ್ಚು ಹಾಕಿ ತುಂಬುವುದು ರೂಢಿಯಲ್ಲಿದೆ. ಆದರೆ ಸಹಕಾರಿ ಸಂಘಗಳೂ ಎಷ್ಟು ಪ್ರಯತ್ನ ಪಟ್ಟರೂ ಒಂದೊಂದು ಸಹಕಾರಿ ಸಂಘದಲ್ಲಿ 50 ರಿಂದ 100 ಕ್ಕೂ ಹೆಚ್ಚು ರೈತರ ಬೆಳೆ ವಿಮೆ ತುಂಬಲಾಗದ ಸ್ಥಿತಿ ಎದುರಾಗಿದೆ. ಇಂತಹ ಸುಮಾರು 18 ಕ್ಕೂ ಹೆಚ್ಚು ಸಹಕಾರಿ ಸಂಘಗಳು ತಾಲೂಕಿನಲ್ಲಿದೆ.

Advertisement. Scroll to continue reading.

ಸರ್ಕಾರದ ಬೇಜವಾಬ್ದಾರಿ ಕಾನೂನು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ತಾಲೂಕಿನಲ್ಲಿ ಸುಮಾರು 1200 ಕ್ಕೂ ಮಿಕ್ಕಿದ ರೈತರು ಬೆಳೆ ವಿಮೆಯಿಂದ ವಂಚಿತರಾಗುವ ಸ್ಥಿತಿ ಬಂದಿದೆ. ತಾಂತ್ರಿಕ ಸಮಸ್ಯೆಯಿಂದ ಹಣ ತುಂಬಿದರೂ ಅದು ಸ್ವೀಕಾರವಾಗುತ್ತಿಲ್ಲ. ಈ ಬಗ್ಗೆ ವಿಮಾ ಕಂಪನಿಯವರನ್ನು ಕೇಳಿದಲ್ಲಿ ಪಹಣಿ ಪತ್ರಿಕೆಯಲ್ಲಿ ಯಾವುದೇ ಬೆಳೆ ನಮೂದು ಇಲ್ಲದ ರೈತರದು ಹಾಗೂ ಪ್ರೂಟ್ಸ್ ಐಡಿ ಅಪಡೇಟ್ ಆಗಿರದ ರೈತರ ವಿಮೆ ಸ್ವಿಕಾರವಾಗುತ್ತಿಲ್ಲ ಎನ್ನುತ್ತಾರೆ.

Advertisement. Scroll to continue reading.

ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ವಾರಸಾ ಬದಲಾವಣೆ , ವಾರಸಾ ಎಂಟ್ರಿ, ಅಪ್ರಾಪ್ತ ರಕ್ಷಕ ತೆಗೆಯುವುದು ಸೇರಿದಂತೆ ಹಲವು ಬದಲಾವಣೆಗಳಾದಾಗ ಪಹಣಿ ಪತ್ರಿಕೆಯಲ್ಲಿ ನೋ ಕ್ರಾಪ್ ಎಂದು ನಮೂದಾಗುತ್ತದೆ. ಇದು ರೈತರ ಗಮನಕ್ಕೆ ಬರದೆ ಈ ಸಮಸ್ಯೆ ಉಂಟಾಗುತ್ತಿದೆ. ಪತ್ರಿಕೆಯಲ್ಲಿ ತಿದ್ದುಪಡಿ ಆದರೆ ಬೆಳೆಯೂ ಬದಲಾವಣೆಯಾಗುತ್ತದೆಯೇ ಎಂಬ ಪ್ರಶ್ನೆ ರೈತರದ್ದು.

ಇನ್ನು ಕಂದಾಯ ಇಲಾಖೆಯು ಬೆಳೆ ಸರ್ವೆಯನ್ನು ಅಕ್ಟೋಬರ್ – ನವೆಂಬರ್ ತಿಂಗಳಿನಲ್ಲಿ ಪ್ರಾರಂಭಿಸುತ್ತದೆ. ಅದರ ನಂತರ ಬೆಳೆ ವಿವರ ಪಹಣಿಯಲ್ಲಿ ನಮೂದಾಗಬೇಕು.‌ ಆದರೆ ವಿಮಾ ತುಂಬಲು ಆಗಸ್ಟ್ 30 ಕೊನೆಯ ದಿನ.‌ ಈ ಅವ್ಯವಸ್ಥೆಗೆ ಯಾರು ಹೊಣೆ? ಬೆಳೆಸಾಲ ತೆಗೆದುಕೊಳ್ಳಲು ಸಾಕಾಗುವ ದಾಖಲೆ ಬೆಳೆ ವಿಮೆಗೆ ಸಾಲುತ್ತಿಲ್ಲವೆ? ಎಂಬುದು ರೈತರ ಪ್ರಶ್ನೆ.
ಅಧಿಕಾರಿಗಳು ಈ ಬಗ್ಗೆ ಜಾಗೃತರಾಗಿ ಸಹಕಾರಿ ಸಂಘಗಳ ಸಹಕಾರದೊಂದಿಗೆ ರೈತರಿಗೆ ನ್ಯಾಯ ಕೊಡಿಸಬೇಕೆಂಬ ಆಗ್ರಹ ರೈತರಿಂದ ಕೇಳಿ ಬಂದಿದೆ.

ShareSendTweetShare
ADVERTISEMENT
Previous Post

ಚಿಕಿತ್ಸೆ ನೀಡುವ ಕೈ, ಮೂರ್ತಿ ತಯಾರಿಸಲೂ ಸೈ

Next Post

ಸಂಭ್ರಮದ ಗಣೇಶ ಚತುರ್ಥಿ: ಘಂಟೆ ಗಣಪನ ದರ್ಶನಕ್ಕೆ ಭಕ್ತ ಸಾಗರ

Next Post
ಸಂಭ್ರಮದ ಗಣೇಶ ಚತುರ್ಥಿ: ಘಂಟೆ ಗಣಪನ ದರ್ಶನಕ್ಕೆ ಭಕ್ತ ಸಾಗರ

ಸಂಭ್ರಮದ ಗಣೇಶ ಚತುರ್ಥಿ: ಘಂಟೆ ಗಣಪನ ದರ್ಶನಕ್ಕೆ ಭಕ್ತ ಸಾಗರ

ದೇವಿ ಮೈದಾನದಲ್ಲಿ 43 ನೇ ವರ್ಷ ಗಜಾನನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ

ದೇವಿ ಮೈದಾನದಲ್ಲಿ 43 ನೇ ವರ್ಷ ಗಜಾನನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ

ಇದ್ದಕ್ಕಿದ್ದಂತೆ ಮಾಯವಾಯ್ತು ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.