ಯಲ್ಲಾಪುರದ ಶ್ರೀ ದೇವಿ ಮೈದಾನ ಗಜಾನನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗದ್ದುಗೆಯಲ್ಲಿ ಬೆಳ್ಳಿ ಪ್ರಭಾವಳಿಯ ಅಲಂಕಾರದೊಂದಿಗೆ ಗಣಪತಿ ಶೋಭಿಸುತ್ತಿದ್ದಾನೆ.
ದೇವಿ ಮೈದಾನ ಉತ್ಸವ ಸಮಿತಿಯ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಈ ಬಾರಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಆ.29 ಶುಕ್ರವಾರ ಸಂಜೆ 6 ಕ್ಕೆ ನಾಗರಾಜ ವೈದ್ಯ ಹಳವಳ್ಳಿ ಹಾಗೂ ಶಿಷ್ಯರಿಂದ ಸಂಗೀತ ಕಾರ್ಯಕ್ರಮ, ಆ.30 ಶನಿವಾರ ಸಂಜೆ 6 ಕ್ಕೆ ಪ್ರಣತಿ ಆಚಾರಿ, ಪ್ರಣತಿ ಹೆಗಡೆ ಜೂಜಿನಬೈಲ
ಸೃಜನಾ ಪಿ.ಬಿ ಅವರಿಂದ ಭರತನಾಟ್ಯ ಕಾರ್ಯಕ್ರಮ, ಆ.31 ರವಿವಾರ ಸಂಜೆ 6 ಕ್ಕೆ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಇವರಿಂದ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಸೆ 1 ಸೋಮವಾರ ಸಂಜೆ 6 ಕ್ಕೆ ಸ.ಹಿ.ಪ್ರಾ ಶಾಲೆ ಸವಣಗೇರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮುಕ್ತ ಅಭಿನಯಗೀತೆ ಸ್ಪರ್ಧೆ,ಛದ್ಮವೇಷ ಸ್ಪರ್ಧೆ, ಸೆ 2 ಮಂಗಳವಾರ ಸಂಜೆ 6 ಕ್ಕೆ ಸದಾಶಿವ ಭಟ್ಟ ಮಲವಳ್ಳಿ ತಂಡದಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸೆ.3 ಬುಧವಾರ ಸಂಜೆ 6 ಕ್ಕೆ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ ಅವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನ ವೈಭವ ನಡೆಯಲಿದೆ. ಸೆ.4 ಗುರುವಾರ ಸಂಜೆ 6 ಕ್ಕೆ ಶ್ರೀನಿಧಿ ಯಕ್ಷ ಬಳಗ ಉಪಳೇಶ್ವರ ಇವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ.
ಪ್ರತಿ ದಿನ ಶ್ರೀ ದೇವರ ಸಮ್ಮುಖದಲ್ಲಿ ಭಜನಾ ಸೇವೆಗೆ ಅವಕಾಶವಿದೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಪತ್ತಾರ,ಪ್ರಧಾನಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ತಿಳಿಸಿದ್ದಾರೆ.







