ಬುಲೆರೊ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದು 6 ಜನರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಸಮೀಪದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಹಳಿಯಾಳದ ಕೆಸರೊಳ್ಳಿಯ ಗುರುನಾಥ ಶಾಂತಾರಾಮ ಚೋಪಡಿ, ಸೈಯ್ಯದ್ ಅಲಿ ಉಮರಸಾಬ ಹಳಬ, ಸುನೀಲ ಬಸ್ತ್ಯಾವ ಡಿಸೋಜಾ, ಜ್ಞಾನೇಶ್ವರ ತುಕಾರಾಮ ಗಂದೇಟಕರ್, ಕಾಳಗಿನಕೊಪ್ಪದ ಸಂದೀಪ ನಿಂಗಪ್ಪ ಶಿವನಗೌಡ, ಹಂದಲಿಯ ಸಚಿನ್ ಪರಶುರಾಮ ಪಾವಲೆ ಗಾಯಗೊಂಡವರು.
ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಬುಲೆರೊ ವಾಹನ, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. 6 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಎರಡೂ ವಾಹನಗಳು ಜಖಂಗೊಂಡಿವೆ. ಬುಲೆರೊ ಚಾಲಕ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮಲ್ಲಪ್ಪ ಜರಳಿ ವಿರುದ್ಧ ಪ್ರಕರಣ ದಾಖಲಾಗಿದೆ.







