ಯಲ್ಲಾಪುರ ತಾಲೂಕಿನ ಹೆಮ್ಮಾಡಿಯ ಚಳ್ಳೆಹೊಂಡದ ಬಳಿ ಮನೆಯ ಪಕ್ಕದ ಶೆಡ್ ನಲ್ಲಿ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಮಹಿಳೆ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಳ್ಳೆಹೊಂಡದ ಪಾರ್ವತಿ ಶಿವಕುಮಾರ ಲಿಂಗದಳ್ಳಿ ತನ್ನ ಮನೆಯ ಪಕ್ಕದ ತಾತ್ಕಾಲಿಕ ಶೆಡ್ ನಲ್ಲಿ ಸಾರ್ವಜನಿಕರಿಗೆ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದರು.
ವಿಷಯ ತಿಳಿದು ದಾಳಿ ನಡೆಸಿದ ಪೊಲೀಸರು, 50 ರೂ ಮೌಲ್ಯದ 4 ವಿಸ್ಕಿ ಪೌಚ್ ಗಳು, 150 ರೂ ನಗದು, ಖಾಲಿ ನೀರಿನ ಬಾಟಲಿ, ಎರಡು ಖಾಲಿ ವಿಸ್ಕಿ ಪೌಚ್ ಗಳನ್ನು ವಶಪಡಿಸಿಕೊಂಡಿದ್ದಾರೆ.







