ಬಾಗಿಲು ಮುರಿದು ಮನೆಯೊಳಗಿದ್ದ ಹಣ ಹಾಗೂ ವಿವಿಧ ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಯಲ್ಲಾಪುರ ತಾಲೂಕಿನ ಭರಣಿಯಲ್ಲಿ ನಡೆದಿದೆ.
ಭರಣಿಯ ಸುಬ್ರಾಯ ಅಣ್ಣಯ್ಯ ಭಟ್ಟ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ.
ಕಪಾಟಿನಲ್ಲಿದ್ದ 30 ಸಾವಿರ ರೂ ಹಣ, ತಂಬಿಗೆಯೊಂದರಲ್ಲಿ ತುಂಬಿಟ್ಟ 5 ಸಾವಿರ ರೂ ಚಿಲ್ಲರೆ ನಾಣ್ಯಗಳು, 2 ರೇಷ್ಮೆ ಸೀರೆಗಳು, ದೇವರ ಕೋಣೆಯಲ್ಲಿದ್ದ ಎರಡು ಬೆಳ್ಳಿ ದೀಪಗಳು, ಬೆಳ್ಳಿಯ ಆಕಳು ಮೂರ್ತಿ, ಬೆಳ್ಳಿಯ ತಂಬಿಗೆ ಹಾಗೂ ಹಾಲ್ ನಲ್ಲಿದ್ದ ಸಿಸಿಟಿವಿಯ ಡಿವಿಆರ್ ನ್ನು ಕದ್ದೊಯ್ದಿದ್ದಾರೆ. ಒಟ್ಟು 63 ಸಾವಿರ ರೂಗಿಂತ ಹೆಚ್ಚಿನ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ.
ಈ ಕುರಿತು ಸುಬ್ರಾಯ ಭಟ್ಟ ಅವರು ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







