ಯಲ್ಲಾಪುರದ ಕಾಳಮ್ಮನಗರದಲ್ಲಿ ಸ್ಕೂಟಿ ಕಳವು ಮಾಡಿದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಹಳಿಯಾಳ ಕ್ರಾಸ್ ನ ಪ್ರಕಾಶ ಇನಾಸ ಸಿದ್ದಿ ಬಂಧಿತ ವ್ಯಕ್ತಿ. ಈತ ಕಳೆದ ಅಕ್ಟೋಬರ್ 15 ರಂದು ಕಾಳಮ್ಮನಗರ ರಸ್ತೆಯ ಎಂ.ಎಚ್.ನಾಯ್ಕ ಕಂಪೌಂಡ್ ಬಳಿಯ ಮನೆಯ ಎದುರು ನಿಲ್ಲಿಸಿದ್ದ ಸ್ಕೂಟಿಯನ್ನು ಕಳವು ಮಾಡಿದ್ದ. ಈ ಬಗ್ಗೆ ಸ್ಕೂಟಿ ಮಾಲೀಕ ರಾಘವೇಂದ್ರ ಮಹಾಬಲೇಶ್ವರ ಭಟ್ಟ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಬಂಧಿತನಿಂತ ಕಳ್ಳತನ ಮಾಡಿದ ಸ್ಕೂಟಿ ವಶಕ್ಕೆ ಪಡೆಯಲಾಗಿದೆ.







