ದಾಂಡೇಲಿ: ಕೋರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ತೆಗ್ಗಿ (27) ಎಂಬಾತ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಆತನ ತಂದೆ ನಿಂಗಪ್ಪ ತೆಗ್ಗಿ ಪೊಲೀಸ್ ಮೋರೆ ಹೋಗಿದ್ದಾರೆ.
ಪ್ರವೀಣ ತೆಗ್ಗಿ ಕೆಲಸ ಮಾಡುತ್ತಿದ್ದ ಕೋರಿಯರ್ ಕಚೇರಿಯಲ್ಲಿ ಹಣಕಾಸಿನ ವ್ಯತ್ಯಾಸ ನಡೆದಿತ್ತು. ಇದರಿಂದ ಪ್ರವೀಣ ಪಾವತಿಸಬೇಕಿದ್ದ ಹಣವನ್ನು ಆತನ ತಂದೆ ನಿಂಗಪ್ಪ ತೆಗ್ಗಿ ಕೋರಿಯರ್ ಕಚೇರಿಯವರಿಗೆ ಪಾವತಿಸಿದ್ದರು. ಈ ವಿಷಯವನ್ನು ಮಗನಿಗೆ ತಿಳಿಸಿ, ಆತನಿಗೆ ನೋವು ಮಾಡಬಾರದು ಎಂದು ಸಹ ಹೇಳಿದ್ದರು. ಆದರೆ, ತಂದೆ ಹಣ ಪಾವತಿಸಿದ ವಿಷಯ ತಿಳಿದ ಪ್ರವೀಣ ಮಾನಸಿಕವಾಗಿ ನೊಂದಿದ್ದ. ಜೊತೆಗೆ ಕಚೇರಿಯಲ್ಲಿನ ಹಣಕಾಸು ವಿಷಯ ಮನೆಯಲ್ಲಿ ಗೊತ್ತಾಗಿದ್ದರಿಂದ ಮರ್ಯಾದೆಗೆ ಅಂಜಿ ಜುಲೈ 3ರಂದು ಆತ ಮನೆಬಿಟ್ಟು ಹೋಗಿದ್ದು, ಇಷ್ಟು ದಿನ ಹುಡುಕಿದರೂ ಪತ್ತೆಯಾಗಿಲ್ಲ.





Discussion about this post