ಕುಮಟಾ: ಭಾನುವಾರ ತಾಲೂಕಿನಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಮುರಿದಿದೆ. ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆಗಳು ಬಿದ್ದಿದ್ದರಿಂದ ವಿದ್ಯುತ್ ಸ್ಥಗಿತ ಸಾಮಾನ್ಯವಾಗಿದೆ.
ನದಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದರಿಂದ ನದಿ ಅಂಚಿನ ಪ್ರದೇಶದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕುಮಟಾ ಕಂದವಳ್ಳಿಯ ನಾಗಿ ಶಿವು ಮುಕ್ರಿ ಅವರ ಮನೆ ಭಾನುವಾರ ಬೆಳಗ್ಗೆ ಕುಸಿದಿದೆ. ಕಲಭಾಗದಲ್ಲಿ ವಿನಾಯಕ ದತ್ತಾ ಕಲಭಾಗ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.





Discussion about this post