ಕುಮಟಾ: ಗುಂದಾ ಮಹಿಷಾಸುರ ಮರ್ಧಿನಿ ದೇವಾಲಯ ಬಳಿಯ ದಿನಕರ ಮಾದೇವ ನಾಯ್ಕ (50) ಮಟ್ಕಾ ದಂದೆ ನಡೆಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅಗಸ್ಟ 9ರಂದು ಮಧ್ಯಾಹ್ನ ಈತ ಅಳ್ವೆಕೊಡಿ ಮೀನು ಮಾರುಕಟ್ಟೆ ಬಳಿ ಮಟ್ಕಾ ಆಡಿಸುತ್ತಿದ್ದ. ಅಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ನಿಂತು 1 ರೂಪಾಯಿಗೆ 80 ರೂ ನೀಡುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿದ್ದ. ಪಿಸೈ ರವಿ ಗುಡ್ಡಿ ದಾಳಿ ನಡೆಸಿ ಆತ ಸಂಗ್ರಹಿಸಿದ್ದ 3170ರೂ ಹಣದೊಂದಿಗೆ ಓಸಿ ಆಟದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.





Discussion about this post