ಕಾರವಾರ: ಹಣಕೋಣಜೋಗದ ಬಳಿ ಕಾಳಿ ನದಿಗೆ ಸ್ನಾನಕ್ಕೆ ಹೋದ ಶೈಲೇಶ ಅನಂತ ತಳ್ಳೇಕರ್ (35) ನದಿ ನೀರು ಕುಡಿದು ಸಾವನಪ್ಪಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಶೈಲೇಶ್ ತಳ್ಳೇಕರ್ ಅಗಸ್ಟ 8ರಂದು ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಸಂಜೆ 4.30ರ ವೇಳೆಗೆ `ಕಾಳಿ ನದಿಗೆ ಹೋಗಿ ಸ್ನಾನ ಮಾಡಿ ಬರುವೆ’ ಎಂದು ಮನೆಯಲ್ಲಿ ಹೇಳಿದ್ದರು. ಆ ದಿನ ನದಿ ಒಳಹರಿವು ಜೋರಾಗಿದ್ದು, ಅದನ್ನು ಲೆಕ್ಕಿಸದೇ ನೀರಿಗೆ ಇಳಿದಿದ್ದರು.
ರಾತ್ರಿಯಾದರೂ ಶೈಲೇಶ್ ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದರು. ಆದರೂ, ಶೈಲೇಶ್ ಪತ್ತೆಯಾಗಿರಲಿಲ್ಲ.
ಅಗಸ್ಟ 9ರಂದು ಇಡೀ ದಿನ ಹುಡುಕಾಟ ನಡೆಸಿದಾಗ ಆ ದಿನ ರಾತ್ರಿ ಕಾಳಿ ನದಿ ದಡದಲ್ಲಿ ಶೈಲೇಶ್ ಶವ ದೊರೆತಿದೆ. ಈ ವಿಷಯ ಅರಿತು ಗೋವಾದ ವಾಸ್ಕೋದಿಂದ ಆಗಮಿಸಿದ ಶೈಲೇಶರ ಬಾವ ರವಿರಾಜ ರೆಡ್ಕರ್ ನೀರು ಕುಡಿದು ಸಾವನಪ್ಪಿದನ್ನು ಖಚಿತಪಡಿಸಿಕೊಂಡರು.





Discussion about this post