ಕಾರವಾರ: ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ‘ಶಿವದೂತ ಪಂಜುರ್ಲಿ’ ಎಂಬ ಪೌರಾಣಿಕ ಕಥಾ ಹಿನ್ನೆಲೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ನಡೂರು ಮಂದಾರ್ತಿಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಆಯೋಜಕರಾದ ಗೋವಾದ ಪೊಳೆಂನ ಸಂತು ಫಿಶ್ ಟೇಲ್ ಮಾಲೀಕ ಸಂತೋಷ್ ಮತ್ತು ದಿವೇಕರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಬಿ.ಆರ್.ತೊಳೆ ತಿಳಿಸಿದ್ದಾರೆ.





Discussion about this post