ಕುಮಟಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅತ್ತಿಗೆ ಮೇಲೆ ಹಲ್ಲೆ ನಡೆಸಿದ ಬಾಬು ಶಿವು ಹರಿಕಂತ್ರ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಜೊತೆ 9 ಸಾವಿರ ದಂಡ ವಿಧಿಸಿದೆ.
ಅಘನಾಶಿನಿಯ ಬಿಳಿಹೊಯ್ಗುವಿನಲ್ಲಿ ಬಾಬು ಹರಿಕಂತ್ರ ಹಾಗೂ ಆತನ ಸಹೋದರ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. 2018ರ ಜುಲೈ 18ರಂದು ಆಸ್ತಿ ವಿಷಯವಾಗಿ ಅಣ್ಣ-ತಮ್ಮನ ನಡುವೆ ಜಗಳ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಬಂದ ಅತ್ತಿಗೆ ಮೇಲೆ ಬಾಬು ಹಲ್ಲೆ ನಡೆಸಿದ್ದ. ಕುಟಾರೆಯಿಂದ ಹೊಡೆದು ಆಕೆಯ ಕೈ ಮುರಿದಿದ್ದ.
ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಎಸೈ ಮಾದೇವ ನಾಯ್ಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಮಂಜುನಾಥ ಬೋರ್ಕರ್ ಸಂತ್ರಸ್ತೆ ಪರ ವಾದಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅಗಸ್ಟ 7ರಂದು ಆದೇಶ ಹೊರಡಿಸಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಿದೆ. ಜೊತೆಗೆ 9 ಸಾವಿರ ರೂ ದಂಡ ಪಾವತಿಸುವಂತೆ ಆತನಿಗೆ ಆದೇಶಿಸಿದೆ.





Discussion about this post