ಶಿರಸಿ (Sirsi): ಬಡ ಜನರ ಆರ್ಥಿಕ ಸಬಲೀಕರಣ, ಶೋಷಣೆಗೆ ಒಳಗಾದ ವರ್ಗಗಳ ಜನ ಜಾಗೃತಿ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸುವುದಕ್ಕಾಗಿ ಮಾನವ ಬಂಧು ವೇದಿಕೆ ದುಡಿಯುತ್ತಿದೆ ಎಂದು ರಾಜ್ಯ ಮಾನವ ಬಂದು ವೇದಿಕೆಯ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಹೇಳಿದರು.
ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಟನೆ ವಿಸ್ತರಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು `ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲಾದ್ಯಂತ ವ್ಯಾಪಕ ಪ್ರಗತಿಪರ ಚಿಂತನೆಯೊAದಿಗೆ ಈ ಸಂಘಟನೆ ಕಾರ್ಯ ನಿರ್ವಹಿಸಲಿದೆ’ ಎಂದರು.
\ಪ್ರಮುಖರಾದ ರವೀಂದ್ರ ನಾಯ್ಕ, ತೋಳಿ ಬರ್ಮಾಣ್ಣ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ನೆಹರು ನಾಯ್ಕ ಕಂಡ್ರಾಜಿ , ಎಮ್. ಆರ್ ನಾಯ್ಕ, ರಾಘವೇಂದ್ರ ನಾಯ್ಕ ಕವಂಚೂರು, ಮಾಬ್ಲೇಶ್ವರ್ ನಾಯ್ಕ ಬೆಡ್ಕಣಿ, ಕರಿಯಾ ಬೋಮ್ಮ ಗೌಡ, ಮಂಜುನಾಥ ಮರಾಠಿ, ನಾಗರಾಜ ಮರಾಠಿ ಇತರರು ಇದ್ದರು.





Discussion about this post