ಯಲ್ಲಾಪುರ: ಅರಬೈಲ್ ಆಂಜಿನೇಯ ದೇವಾಲಯದ ಗೋಡೆಗೆ ಗುದ್ದಿದ ಲಾರಿ ಮುಂದಿದ್ದ ಮರಕ್ಕೆ ಮತ್ತೆ ಗುದ್ದಿ ಪಲ್ಟಿಯಾಗಿದೆ.
ಜಾರ್ಖಂಡದ ಸೌರಬಕುಮಾರ (21) ಎಂಬಾತ ಲಾರಿಯಲ್ಲಿ ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಸಿಮೆಂಟ್ ಚೀಲಗಳನ್ನು ತುಂಬಿಕೊoಡು ಸಾಗುತ್ತಿದ್ದ. ಸೆ 2ರಂದು ಈ ಲಾರಿ ಯಲ್ಲಾಪುರ ಪ್ರವೇಶಿಸಿದ್ದು, ಬೆಳಗ್ಗೆ 5 ಗಂಟೆಗೆ ಲಾರಿ ಹನುಮಂತ ದೇವಾಲಯದ ಮುಂದಿನ ಗೋಡೆಗೆ ಗುದ್ದಿದೆ. ಇದಾದ ನಂತರ ಮತ್ತೆ ಮುಂದಿದ್ದ ಮರಕ್ಕೆ ಲಾರಿ ಗುದ್ದಿ ಪಲ್ಟಿಯಾಗಿದೆ. ಪರಿಣಾಮ ಲಾರಿಯ ಕ್ಯಾಬಿನ್ ಜಖಂ ಆಗಿದ್ದು, ಒಳಗಿದ್ದ ಸಿಮೆಂಟ್ ಚೀಲಗಳೆಲ್ಲವೂ ನೆಲಕ್ಕೆ ಬಿದ್ದಿದೆ.
ಈ ಅಪಘಾತದಲ್ಲಿ ಲಾರಿ ಚಾಲಕ ಸೌರಬಕುಮಾರ’ಗೆ ತಲೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಸಿಮೆಂಟ್ ಲಾರಿ ಅಪಘಾತದ ಕಾರಣ ಘಂಟೆಗಳ ಕಾಲ ಆ ಪ್ರದೇಶ ದೂಳಿನಿಂದ ಆವರಿಸಿತ್ತು. ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಗುಡಿ ಈ ಬಗ್ಗೆ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. `ದೇವರ ದಯೆಯಿಂದ ಹೆಚ್ಚಿನ ಅನಾಹುತ ನಡೆದಿಲ್ಲ’ ಎಂದು ಚಾಲಕ ಹೇಳಿಕೊಂಡಿದ್ದಾನೆ.




