ಕಾರವಾರ: ಹಬ್ಬುವಾಡದ ಸುಮನರೋಮಾ ಅಪಾರ್ಟಮೆಂಟ್ ಹಿಂದೆ ವಾಸವಾಗಿರುವ ಬಾಬುಲಾಲ ಸವಾರಾಮ ಭಾಟಿ ಎಂಬಾತರು ಮಹಾಲಕ್ಷ್ಮಿ ಫರ್ನಿಚರ್ ಎಂಬ ಅಂಗಡಿ ಮಾಲಕರಾಗಿದ್ದು, ಪಕ್ಕದ ಅಂಗಡಿಗೆ ಬಾಡಿಗೆಗೆ ಬಂದಿದ್ದ ಗಜಾನನ ಮಂಜುನಾಥ ರೇವಣಕರ್ ಎಂಬಾತರ ರಂಪಾಟ ಹಾಗೂ ಬೆದರಿಕೆಗೆ ಕಂಗಾಲಾಗಿದ್ದಾರೆ.
ಬಾಬುಲಾಲ ಅವರು ಮಹಾಲಕ್ಷ್ಮಿ ಫರ್ನಿಚರ್ ಮಳಿಗೆಯನ್ನು ಭರತಕುಮಾರ ಚೌದರಿ ಎಂಬಾತರಿಗೆ ಬಾಡಿಗೆಗೆ ನೀಡಿದ್ದರು. ಪಕ್ಕದಲ್ಲಿದ್ದ ಶ್ಯಾಮ ಮುಕುಂದ ಸಾವಂತ ಎಂಬಾತರ ಕಟ್ಟಡದಲ್ಲಿ ಗಜಾನನ ರೇವಣಕರ್ ಆಟೋ ಮೊಬೈಲ್ ಮಳಿಗೆ ನಡೆಸುತ್ತಿದ್ದರು. ಹೀಗಿರುವಾಗ ಅಗಸ್ಟ 7ರಂದು ಗಜಾನನ ರೇವಣಕರ್ ಈ ಎರಡು ಅಂಗಡಿ ನಡುವಿನ ಗೋಡೆಯನ್ನು ಒಡೆದಿದ್ದು, ಆ ಗೋಡೆ ಮಹಾಲಕ್ಷ್ಮಿ ಫರ್ನಿಚರ್’ನ ಮೇಲೆ ಬಿದ್ದಿದೆ. ಇದರಿಂದ ಫರ್ನಿಚರ್ ಮಳಿಗೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಹಾಳಾಗಿ 45 ಸಾವಿರ ರೂ ನಷ್ಟವಾಗಿದೆ.
ಈ ಬಗ್ಗೆ ಬಾಬುಲಾಲ್ ಪ್ರಶ್ನಿಸಿದಾಗ ಗಜಾನನ ರೇವಣಕರ್ ಕೆಟ್ಟದಾಗಿ ಬೈದು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಬಾಬುಲಾಲ್ ನ್ಯಾಯಾಲಯಕ್ಕೆ ಹೋಗಿ ದೂರು ಸಲ್ಲಿಸಿದ ದೂರು ಸೆಪ್ಟೆಂಬರ್ 4ರಂದು ಪೊಲೀಸರಿಗೆ ವರ್ಗವಾಗಿದೆ.




