ಕಾರವಾರ: ಬಾಂಡಿಶೆಟ್ಟಾದ ಸಂಜನಾ ಗಜಾನನ ತಳೇಕರ್ (39) ಎಂಬಾತರು ತನ್ನ ಮಗಳನ್ನು ಶಾಲೆಗೆ ಕಳುಹಿಸಿ ನಂತರ ಕಾಡಿಗೆ ತೆರಳಿ ಬೆಂಕಿ ಹಚ್ಚಿಕೊಂಡು ಸಾವನಪ್ಪಿದ್ದಾರೆ.
ಕಿನ್ನರದ ಅಂಬೇಜೂಗದ ಸಂಜನಾ ಅವರು ಬಾಂಡಿಶೆಟ್ಟಾದಲ್ಲಿ ಪತಿ ಗಜಾನನ ಹಾಗೂ ಮಗಳು ಸಾಕ್ಷಿ ಜೊತೆ ವಾಸಿಸುತ್ತಿದ್ದರು. ಅನಾರೋಗ್ಯದ ಹಿನ್ನಲೆ ಗೋವಾ ಹಾಗೂ ಕಾರವಾರದಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಆದರೆ, ಆರೋಗ್ಯದಲ್ಲಿ ಸುದಾರಣೆ ಕಂಡಿರಲಿಲ್ಲ. ಸೆ 4ರಂದು ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದ ಸಂಜನಾ ಸೀಮೆಎಣ್ಣೆ ಜೊತೆ ಹೊರ ಬಿದ್ದಿದ್ದು, ಪಕ್ಕದಮನೆ ಮಂಗಲಾ ಇದನ್ನು ಪ್ರಶ್ನಿಸಿದ್ದರು. ಆಗ ಸಂಜನಾ ಸಂಬoಧಿಕರ ಮನೆಗೆ ಸೀಮೆಎಣ್ಣೆ ಕ್ಯಾನ್ ಕೊಟ್ಟುಬರುವುದಾಗಿ ಸುಳ್ಳು ಹೇಳಿದ್ದರು.
ನಂತರ ಶಿರವಾಡ ದೇವತೆವಾಡಗೆ ತೆರಳಿದ ಸಂಜನಾ ಅಲ್ಲಿನ ಗಿಡ-ಗಂಟಿಗಳ ನಡುವೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ನಂತರ ಬೆಂಕಿ ಹಚ್ಚಿಕೊಂಡು ಸಾವನಪ್ಪಿದ್ದಾರೆ. ದೇಹ ಸುಟ್ಟು ಕರಕಲಾಗಿದ್ದನ್ನು ನೋಡಿದ ಸ್ಥಳೀಯರಾದ ಮನೋಜ ಮಹಾದೇವ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಗೆ ಬಂದ ಹೊಸಾಳಿ ತರ್ಲೆಭಾಗದ ನೀಲೇಶ ನಾಗೇಶ ಪಡವಳಕರ್ `ಸಾವನಪ್ಪಿರುವುದು ತನ್ನ ತಂಗಿ ಸಂಜನಾ’ ಎಂದು ಖಚಿತಪಡಿಸಿದ್ದಾರೆ.




