ಜೊಯಿಡಾ: ತಿನೈಘಾಟ್ ರೈಲು ನಿಲ್ದಾಣದ ಬಳಿ ಕೃಷಿ ಕೆಲಸ ಮಾಡಿಕೊಂಡಿರುವ ಪ್ರಕಾಶ ರಾಮಾ ದೇಸಾಯಿ ಎಂಬಾತರು ಹೊಲಕ್ಕೆ ಹೋದಾಗ ಅವರಿಗೆ ಅಪರಿಚಿತ ಶವ ಕಾಣಿಸಿದೆ.
ಮಾರಂಸರ ರೈಲ್ವೆ ಗೇಟ್ ಬಳಿ ಪ್ರಕಾಶ ದೇಸಾಯಿ ಭತ್ತ ಬೆಳೆದಿದ್ದು, ಸೆ 4ರಂದು ಅವರು ಗದ್ದೆಗೆ ಹೋಗಿದ್ದರು. ಆಗ ಅವರ ಮೂಗಿಗೆ ಪ್ರಾಣಿ ಸತ್ತ ವಾಸನೆ ಬಡಿದಿದ್ದು, ವಾಸನೆ ಬಂದ ದಿಕ್ಕಿನ ಕಡೆ ತಿರುಗಾಡಿದರು. ಅಲ್ಲಿ ಅಂದಾಜು 50 ವರ್ಷದ ವ್ಯಕ್ತಿಯೊಬ್ಬ ಸಾವನಪ್ಪಿರುವುದು ಅವರಿಗೆ ಕಾಣಿಸಿದೆ. ಹತ್ತಿರ ಹೋಗಿ ನೋಡಿದಾಗ ಆತ ಪರಿಚಿತನಾಗಿರಲಿಲ್ಲ.
ಸಾವನಪ್ಪಿದ ವ್ಯಕ್ತಿಯ ಬಲ ಕೈಯಲ್ಲಿ ಮರದ ಟೊಂಗೆಯಿದ್ದು, ಅದೇ ಕೋಲಿನ ಆಧಾರದಲ್ಲಿ ಆತ ಅಲ್ಲಿ ಸಿಲುಕಿಕೊಂಡಿದ್ದ. ಜಲಚರಗಳು ಆತನ ತುಟಿ ಹಾಗೂ ದೇಹದ ವಿವಿಧ ಭಾಗಗಳನ್ನು ತಿಂದಿದ್ದರಿoದ ಅರೆಬರೆ ದೇಹ ಮಾತ್ರ ಅಲ್ಲಿ ಕಾಣಿಸಿದೆ. ದೇಹದ ಮೇಲೆ ತೆರಚಿದ ಗಾಯಗಳು ಇವೆ. ಮೂರು ದಿನದ ಹಿಂದೆಯೇ ಆತನ ಸಾವನಪ್ಪಿರುವ ಶಂಕೆಯಿದ್ದು, ಸಾವಿಗೆ ಕಾರಣವೂ ಗೊತ್ತಾಗಿಲ್ಲ.




