ಕಾರವಾರ: ಸರಾಯಿ ಅಭಿಷೇಕ, ಸಿಗರೇಟಿನ ಆರತಿ ಮೂಲಕ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಮೇಲೆಯೂ ಕಳ್ಳರ ಕಣ್ಣು ಬಿದ್ದಿದೆ.
ಕಾಳಿ ನದಿ ಸೇತುವೆ ಸಮೀಪದ ಕೋಡಿಬಾಗದಲ್ಲಿರುವ ಕಾಫ್ರಿ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ದೇವಸ್ಥಾನ ಹಾಲ್ ಹಾಗೂ ಗರ್ಭಗುಡಿ ಹತ್ತಿರ ಇರುವ ಎರಡು ಹುಂಡಿ ಒಡೆದ ಕಳ್ಳರು ಅಲ್ಲಿದ್ದ ಹಣ ದೋಚಿದ್ದಾರೆ. ಈ ಕಳ್ಳರು ದೇವರ ಮೇಲಿದ್ದ ಬಂಗಾರವನ್ನು ಮುಟ್ಟುವ ಧೈರ್ಯ ಮಾಡಿಲ್ಲ.
ಪೊಲೀಸರು ಶ್ವಾನ ದಳ ಬಳಸಿ ಕಳ್ಳರ ಪತ್ತೆಗೆ ಹುಡುಕಾಡಿದ್ದು, ದೇವಸ್ಥಾನ ಸಮೀಪದ ಲಾಡ್ಜ ಹಾಗೂ ಹೋಟೆಲ್ ಸಿಬ್ಬಂದಿ ಬಳಿ ವಿಚಾರಿಸಿದ್ದಾರೆ. ಆಫ್ರಿಕಾ ಪ್ರಸಿದ್ದ ಸಂತನ ನೆನಪಿಗಾಗಿ ಕಟ್ಟಿದ ದೇವಸ್ಥಾನ ಇದಾಗಿದ್ದು, ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತಿದೆ. ದೇವರಿಗೆ ಸಿಗರೇಟಿನ ಆರತಿ ಹಾಗೂ ಸರಾಯಿ ನೈವೇದ್ಯ ಇಲ್ಲಿನ ವಿಶೇಷ.




