ಕುಮಟಾ: ಪಟ್ಟಣದಲ್ಲಿನ ದನಗಳನ್ನು ಕದ್ದು ಸಾಗಿಸುವವರನ್ನು ಬಂಧಿಸುವoತೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಹರೆ ಕಾಣಿಸಿದ್ದು, ಈ ಆಧಾರದಲ್ಲಿ ಅವರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕುಮಟಾ ಸಿಪಿಐ ತಿಮ್ಮಪ್ಪ ನಾಯ್ಕ ಅವರಿಗೆ ಮನವಿ ಸಲ್ಲಿಸಿದ ಸಮಗಟನೆ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ `ಈ ಬಗ್ಗೆ ದೂರು ನೀಡಿದರೂ ಕ್ರಮ ಆಗಿಲ್ಲ’ ಎಂದು ಆರೋಪಿಸಿದರು. `ಕಳೆದ ವಾರ ಮತ್ತೆ ದನಗಳ್ಳತನ ನಡೆದಿದ್ದು, ಕಳ್ಳರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು. ಸುಧಾಕರ ನಾಯ್ಕ, ಅಹ್ಮದ್ ಹಾಗೂ ಮಂಜು ಈ ವೇಳೆ ಇದ್ದರು.
ಶಾಲೆಗೆ ಭೂಮಿ ನೀಡಿದ್ದ ದಾನಿ ಇನ್ನಿಲ್ಲ

ಭಟ್ಕಳ: ಜಿ.ಎಸ್.ಬಿ. ಸಮಾಜದ ತಾಲೂಕಾ ಅಧ್ಯಕ್ಷ ಸುಬ್ರಾಯ ದೇವಿದಾಸ ಕಾಮತ್ (79) ಅವರು ಶುಕ್ರವಾರ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಕಡುಬಡತನದಿಂದ ಜೀವನ ಆರಂಭಿಸಿದ್ದ ಸುಬ್ರಾಯ ಕಾಮತ ತಾಲೂಕಿನ ಹಲ್ಯಾಣಿಯಲ್ಲಿ ಕೃಷಿಕರಾಗಿದ್ದರು. ಹಲವರ ಪಾಲಿಗೆ ಕೊಡುಗೈ ದಾನಿಯಾಗಿದ್ದರು. ಅಲ್ಲಿನ ಸರ್ಕಾರಿ ಶಾಲೆಗೆ ಅಗತ್ಯವಿದ್ದ ಸ್ಥಳದಾನ ಮಾಡಿದ್ದ ಅವರು ಗ್ರಾಮೀಣ ಭಾಗದ ಜನರ ಶಿಕ್ಷಣದ ಕುರಿತು ಕಾಳಜಿ ವಹಿಸುತ್ತಿದ್ದರು. ಧಾರ್ಮಿಕ ಕ್ಷೇತ್ರಕ್ಕೂ ವಿಶೇಷ ಕೊಡುಗೆ ನೀಡಿದ್ದರು.




