ಜೊಯಿಡಾ: ರೈಲ್ವೆ ಹಳಿಗಳ ನಿರ್ವಹಣೆ ನೋಡಿಕೊಳ್ಳುವುದಕ್ಕಾಗಿ ಬಿಹಾರದಿಂದ ಜೊಯಿಡಾಗೆ ಬಂದಿದ್ದ ಸತ್ಯೇಂದ್ರಕುಮಾರ (33) ವಿಪರೀತ ಸರಾಯಿ ಕುಡಿದು ಸಾವನಪ್ಪಿದ್ದಾರೆ.
ಕ್ಯಾಸಲ್ರಾಕ್ನಲ್ಲಿರುವ ಹಳೆಯ ರೈಲ್ವೆ ವಸತಿ ನಿಲಯದಲ್ಲಿ ಸತ್ಯೇಂದ್ರಕುಮಾರ ಒಬ್ಬರೇ ವಾಸವಾಗಿದ್ದರು. ಸೆ 2ರಂದು ಸರಾಯಿ ಕುಡಿದು ಅಸ್ವಸ್ಥಗೊಂಡಿದ್ದರು. ರೈಲು ಹಳಿ ಬಳಿ ಬಿದ್ದ ಅವರಿಗೆ ಇತರೆ ಸಿಬ್ಬಂದಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಸಾವಿರಾರು ಜನರ ಜೀವ ಕಾಪಾಡಿದ ರೈಲು ಸಿಬ್ಬಂದಿ
ಮರುದಿನ ಬೆಳಗ್ಗೆ ಅವರು ಅಲ್ಲಲ್ಲಿ ಓಡಾಡಿಕೊಂಡಿದ್ದರು. ಸಂಜೆ ಪತ್ನಿ ಪತ್ನಿ ಪ್ರಿಯಾಂಕಕುಮಾರಿ ಫೋನ್ ಮಾಡಿದಾಗ ಸ್ವೀಕರಿಸಿಲ್ಲ. ಆಗ ಪ್ರಿಯಾಂಕಕುಮಾರಿ ರೈಲ್ವೆ ನೌಕರ ಭಾಗಿರಥ ಪಂಡೀತ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಸಂಜೆ 5 ಗಂಟೆಗೆ ರೈಲ್ವೆ ವಸತಿ ನಿಲಯಕ್ಕೆ ಭಾಗಿರಥ ಪಂಡೀತ ಹೋಗಿ ನೋಡಿದಾಗ ಸತ್ಯೇಂದ್ರಕುಮಾರ ಸಾವನಪ್ಪಿರುವುದು ಗೊತ್ತಾಗಿದೆ.




