6
  • Latest

ಉದ್ಯಮಿಗಳ ನಡುವೆ ಕಾಳಗ: ಹೆಣ ಬಿದ್ದಿದ್ದು ಹಣಕ್ಕಾಗಿ ಅಲ್ಲ.. ಹೆಣ್ಣಿಗಾಗಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಉದ್ಯಮಿಗಳ ನಡುವೆ ಕಾಳಗ: ಹೆಣ ಬಿದ್ದಿದ್ದು ಹಣಕ್ಕಾಗಿ ಅಲ್ಲ.. ಹೆಣ್ಣಿಗಾಗಿ!

AchyutKumar by AchyutKumar
September 24, 2024
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ಹಣಕೋಣದಲ್ಲಿ ನಡೆದ ಉದ್ಯಮಿ ವಿನಾಯಕ ನಾಯ್ಕನ ಹತ್ಯೆ ಹಣಕ್ಕಾಗಿ ಅಲ್ಲ ಹೆಣ್ಣಿಗಾಗಿ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಳಿ ಬಣ್ಣದ ಕಾರು ಅನುಮಾನಾಸ್ಪದವಾಗಿ ಸಂಚರಿಸಿದ ಮಾಹಿತಿ ಸಿಕ್ಕಿದ್ದು, ಆ ಕಾರಿನಲ್ಲಿಯೇ ಆರೋಪಿತರು ಬಂದು-ಹೋಗಿರುವ ಅನುಮಾನ ಕಾಡುತ್ತಿದೆ.

ಹಣಕೋಣದ ವಿನಾಯಕ ನಾಯ್ಕ ಭಾನುವಾರ ಬೆಳಗ್ಗೆ ಕೊಲೆಯಾಗಿದ್ದರು. ಕಬ್ಬಿಣದ ರಾಡು, ಕತ್ತಿಯಿಂದ ಹೊಡೆದು ಅವರನ್ನು ಕೊಲೆ ಮಾಡಲಾಗಿತ್ತು. ವಿನಾಯಕ ನಾಯ್ಕ ಪೂಣಾದಲ್ಲಿ ಉದ್ಯಮಿಯಾಗಿದ್ದು ಗಣೇಶ ಹಬ್ಬದ ಹಿನ್ನಲೆ ಊರಿಗೆ ಬಂದಿದ್ದರು. ಊರಿನ ದೇವಿ ಜಾತ್ರೆಯಲ್ಲಿ ಭಾಗವಹಿಸಿ ಮರಳಿ ಪೂನಾಗೆ ತೆರಳುವ ತಯಾರಿ ನಡೆಸಿದ್ದರು. ಆ ವೇಳೆಗಾಗಲೇ ನಾಲ್ವರು ಅವರ ಮನೆಗೆ ನುಗ್ಗಿ ಕೊಲೆ ಮಾಡಿದ್ದರು.

ADVERTISEMENT
ADVERTISEMENT

ವಿನಾಯಕ ನಾಯ್ಕ ಅವರ ಪತ್ನಿ ವೈಶಾಲಿ ನಾಯ್ಕ ಮೇಲೆ ಸಹ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಮಂಗಳೂರು ವಿಭಾಗದ ಐಜಿಪಿ ಅಮಿತ್ ಸಿಂಗ್ ಸಹ ಸ್ಥಳಕ್ಕೆ ಬಂದು ಹೋಗಿದ್ದಾರೆ. ಕಾರವಾರ ಡಿವೈಎಸ್‌ಪಿ ಗಿರೀಶ್ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.

Advertisement. Scroll to continue reading.
Advertisement. Scroll to continue reading.

ತನಿಖಾ ತಂಡಕ್ಕೆ ಸಮೀಪದ ಬ್ಯಾಂಕಿನ ಸಿಸಿ ಟಿವಿಯಲ್ಲಿ ಬಿಳಿ ಬಣ್ಣದ ಕಾರು ಕಾಣಿಸಿದೆ. ಆ ಕಾರಿನ ಬೆನ್ನಿಡಿದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆ ಕಾರು ಗೋವಾ ಚೆಕ್‌ಪೋಸ್ಟ್ ಮೂಲಕ ಹಾದುಹೋಗಿರುವುದು ಈವರೆಗೆ ಗೊತ್ತಾಗಿದೆ. ಕಾರು ಮಾಹಿತಿ ಆಧರಿಸಿ ಒಬ್ಬನ ವಿಚಾರಣೆಯೂ ನಡೆದಿದೆ. ಹೊರ ರಾಜ್ಯದಿಂದ ಬಂದವರು ಕೊಲೆ ಮಾಡಿ ಪರಾರಿಯಾದ ಬಗ್ಗೆ ವಿಚಾರಣೆಗೆ ಒಳಗಾದವ ಮಾಹಿತಿ ನೀಡಿದ್ದು, ಉದ್ಯಮಿಯೊಬ್ಬರ ಕೈವಾಡ ಈ ಕೊಲೆ ಹಿಂದಿರುವ ಬಗ್ಗೆ ಚರ್ಚೆ ನಡೆದಿದೆ.

ಕಾರವಾರ ತಾಲೂಕಿನ ಉದ್ಯಮಿಯೊಬ್ಬ ಗೋವಾದಲ್ಲಿದ್ದು ಸಾವನಪ್ಪಿದ ವಿನಾಯಕ ನಾಯ್ಕ ಹಾಗೂ ಆ ಉದ್ಯಮಿ ನಡುವೆ ಕೌಟುಂಬಿಕ ವಿಷಯವಾಗಿ ಕಲಹ ನಡೆದಿತ್ತು. ಹೆಣ್ಣಿನ ವಿಚಾರವಾಗಿ ಇದು ದ್ವೇಷಕ್ಕೆ ತಿರುಗಿದ್ದು, ಕೊಲೆಗೆ ಇದೇ ಕಾರಣ ಎಂಬ ಅನುಮಾನಗಳು ದಟ್ಟವಾಗಿದೆ. ಕೊಲೆಯಾದ ನಂತರ ಆ ಉದ್ಯಮಿ ಸಹ ಕಣ್ಮರೆಯಾಗಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ.

ShareSendTweetShare
ADVERTISEMENT
Previous Post

ಪುರಸಭೆ ಆದರೂ ಅಭಿವೃದ್ಧಿ ಶೂನ್ಯ: ಕರವೇ ನಾಗರಾಜ ಆರೋಪ

Next Post

ಮಕ್ಕಳ ಆಟಿಕೆ ಬಗ್ಗೆ ನಿರ್ಲಕ್ಷ್ಯ: ಪುರಸಭೆ ವಿರುದ್ಧ ಮುಖ್ಯಮಂತ್ರಿಗೆ ದೂರು!

Next Post

ಮಕ್ಕಳ ಆಟಿಕೆ ಬಗ್ಗೆ ನಿರ್ಲಕ್ಷ್ಯ: ಪುರಸಭೆ ವಿರುದ್ಧ ಮುಖ್ಯಮಂತ್ರಿಗೆ ದೂರು!

ಉನ್ನತ ವ್ಯಾಸಂಗಕ್ಕೆ ಉಪಯೋಗವಾದ ನರೆಗಾ ಹಣ: ಕೂಲಿಕಾರನ ಮಗನಿಗೆ ಒಲಿದ ಚಿನ್ನ!

ತಿರುಪತಿ ಲಡ್ಡು ತಿಂದವರಿಗೆ ಮೂರುನಾಮ: ನಾಗರಿಕನ ಕಳವಳ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.