ಅಂಕೋಲಾ: ಅವರ್ಸಾದ ರಾಜೇಶ ಗಾಂವಕರ (20) ಸೇತುವೆಗೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿಕೊಂಡಿದ್ದು ಹಗ್ಗದ ಇನ್ನೊಂದು ತುದಿಗೆ ರಾಜೇಶ ಗಾಂವ್ಕರ್ ನೇತಾಡುತ್ತಿರುವುದನ್ನು ನೋಡಿ ಜನ ಕಕ್ಕಾಬಿಕ್ಕಿಯಾದರು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಸಿಪಿಐ ಚಂದ್ರಶೇಖರ ಮಠಪತಿ , ಪಿಎಸ್ಐ ಸುನೀಲ್ ಹುಲ್ಗೊಳ್ಳಿ ಜೊತೆ ಪೊಲೀಸ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.




