ಶಿರಸಿ: ಬಾಳೆಕಾಯಿ ಚಿಪ್ಸ್ ಮೂಲಕ ಗ್ರಾಮೀಣ ಜನರ ಬದುಕಿಗೆ ನೆರವಾಗಿದ್ದ ಪಾಕ್ಟರಿಗೆ ಬೆಂಕಿ ತಗುಲಿದೆ.
ಶಿರಸಿ ಅಚನಳ್ಳಿಯಲ್ಲಿ ಆದೀಶ ನೇತ್ರೇಕರ್ ಅವರು ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದರು. ಹಳ್ಳಿಭಾಗದಿಂದ ಬಾಳೆಕಾಯಿ ಖರೀದಿಸಿ ಅದನ್ನು ಚಿಪ್ಸ್ ಮಾಡಿ ಮಾರಾಟ ಮಾಡುತ್ತಿದ್ದರು. ಇದರಿಂದ ಕೆಲವರಿಗೆ ಉದ್ಯೋಗವೂ ಸಿಕ್ಕಿತ್ತು.
ಆದರೆ, ಸೋಮವಾರ ನಡೆದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಚಿಪ್ಸ್ ತಯಾರಿಕಾ ಯಂತ್ರ ಸುಟ್ಟಿದೆ. ಗೋದಾಮು ಹೊತ್ತಿ ಉರಿದಿದೆ. ಅಂದಾಜು 5 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ.





