ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ.
ಭಾನುವಾರ ರಾತ್ರಿಯವರೆಗೂ ಶಿರಸಿಯ ಮಹಾಸತಿ ಸರ್ಕಲ್ ಬಳಿ ಇದ್ದ ಎರಡು ಗೂಡಗಂಡಿಗಳು ಸೋಮವಾರ ಬೆಳಗ್ಗೆ ಅಲ್ಲಿರಲಿಲ್ಲ. ಮಾಲ್ಕಿ ಜಾಗದಲ್ಲಿದ್ದ ಅಂಗಡಿಗಳನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ದ್ವೇಷದ ಹಿನ್ನಲೆ ಈ ಕೆಲಸ ಮಾಡಿದ ಅನುಮಾನಗಳಿವೆ.
ರಸ್ತೆ ಪಕ್ಕದಲ್ಲಿದ್ದ ಈ ಗೂಂಡ0ಗಡಿಯನ್ನು ಬೇರೆಡೆ ಸ್ಥಳಾಂತರಿಸುವ0ತೆ ನಗರಸಭೆಯವರು ಸೂಚಿಸಿದ್ದರು. ಈ ಹಿನ್ನಲೆ ಅಂಗಡಿ ಮಾಲಕರು ತಮ್ಮ ಗೂಡಂಗಡಿಯನ್ನು ಮಾಲ್ಕಿ ಜಾಗಕ್ಕೆ ಕೊಂಡೊಯ್ದಿದ್ದರು. ಆದರೆ, ರಸ್ತೆ ಪಕ್ಕದ ಜಾಗವನ್ನು ಗೂಡಂಗಡಿ ಮಾಲಕರೇ ಸ್ವಚ್ಛ ಮಾಡಿದ್ದರು.
ಅದಾಗಿಯೂ ಅವರನ್ನು ಸಹಿಸದ ಕಿಡಿಗೇಡಿಗಳು ಅಂಗಡಿಯನ್ನು ಧ್ವಂಸ ಮಾಡಿ, ಅಲ್ಲಿದ್ದ ಸಾಮಗ್ರಿಗಳನ್ನು ರಸ್ತೆಗೆ ತಂದಿದ್ದಾರೆ. ಅಂಗಡಿ ಒಳಗೆ ದರೋಡೆ ನಡೆದ ಅನುಮಾನಗಳು ವ್ಯಕ್ತವಾಗಿದೆ.





