ಕುಮಟಾ: ಗೋಕರ್ಣದ ಪ್ರಸಿದ್ಧ ಓಂ ಕಡಲತೀರದ ಬಳಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಭಾನುವಾರ ಬೇಲೇಕಾನ್ ರಸ್ತೆ ಅಂಚಿನಲ್ಲಿ ಕೂತಿದ್ದ ಮಾದನಗೇರಿ ಹೊಸನಗೆದ ದೇವರಾಜ ಗಂಗಾಧರ ಹರಿಕಂತ್ರ (29),ಉದಯ ಬಾಬು ಹರಿಕಂತ್ರ (39), ಹೊಸನಗರದ ಈಶ್ವರ ಲೋಕಪ್ಪ ಹರಿಕಂತ್ರ(70) ಭಾಸ್ಕರ ಮಂಗೇಶ ಹರಿಕಂತ್ರ (37) ಜೂಜಾಡುತ್ತಿದ್ದರು.
ಇಸ್ಪಿಟ್ ಎಲೆಗಳ ಜೊತೆ 1220ರೂ ಹಣವನ್ನು ಅವರು ಹರಡಿಕೊಂಡಿದ್ದರು. ಪೊಲೀಸ್ ಉಪನಿರೀಕ್ಷಕ ಖಾದರ್ ಭಾಷಾ ಅವರ ಮೇಲೆ ದಾಳಿ ನಡೆಸಿ, ಹಣದ ಜೊತೆ ಜೂಜಾಟದ ಪರಿಕ್ಕರಗಳನ್ನು ವಶಕ್ಕೆ ಪಡೆದರು.





