ಸಿದ್ದಾಪುರ: ಜಾನುವಾರುಗಳ ಮೇವಿಗೆ ಹುಲ್ಲು ತರುವುದಕ್ಕಾಗಿ ಹೊಲಕ್ಕೆ ಹೋಗಿದ್ದ ಕೋಲಸಿರ್ಸಿ ಕೃಷ್ಣ ಕರಿಯಾ ನಾಯ್ಕ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಭಾನುವಾರ ಅವರು ಕೃಷಿ ಕೆಲಸ ಹಾಗೂ ಹುಲ್ಲು ತರಲು ಗದ್ದೆಗೆ ಹೋಗಿದ್ದರು. ರಾತ್ರಿ ಆದರೂ ಮನೆಗೆ ಮರಳದ ಕಾರಣ ಅವರ ಪತ್ನಿ ಶಾರದಾ ನಾಯ್ಕ ಹುಡುಕಾಟ ಶುರು ಮಾಡಿದರು. ಪಕ್ಕದಮನೆ ಶ್ಯಾಮಲಾ ನಾಯ್ಕ ಅವರ ಜೊತೆಗೂಡಿ ಹೊಲದ ಕಡೆ ಹೆಜ್ಜೆ ಹಾಕಿದ ಆ ಇಬ್ಬರಿಗೂ ಕೃಷ್ಣ ಅವರು ಕೊಂಡೊಯ್ದಿದ್ದ ಕತ್ತಿ ಹಾಗೂ ಹಗ್ಗ ಕಾಣಿಸಿತು.
ಅಲ್ಲೇ ಸ್ವಲ್ಪ ಮುಂದೆ ಕೃಷ್ಣ ನಾಯ್ಕ ತಲೆ ಕೆಳಗಾಗಿ ನೀರಿನಲ್ಲಿ ಮುಖ ಮುಳುಗಿಸಿ ಮಲಗಿದ್ದರು. ಅವರನ್ನು ಎಬ್ಬಿಸುವ ಪ್ರಯತ್ನ ನಡೆಸಿದರು ಪ್ರಯೋಜನವಾಗಲಿಲ್ಲ. ಹೀಗಾಗಿ 108 ಆಂಬುಲೆನ್ಸಿಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಆಂಬುಲೆನ್ಸಿನವರು ಪರೀಕ್ಷಿಸಿ, ಕೃಷ್ಣ ಅವರು ಸಾವನಪ್ಪಿದ ಬಗ್ಗೆ ಘೋಷಿಸಿದರು.
ಕೃಷ್ಣ ಕರಿಯಾ ನಾಯ್ಕ (64) ಕಾಲು ಜಾರಿ ಬಿದ್ದು ಸಾವನಪ್ಪಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.




