ಅoಕೋಲಾ: ಮನೆ ಮಾಲಕರು ಕೂಲಿ ಕೆಲಸಕ್ಕೆ ಹೋದಾಗ ಮನೆಗೆ ಬೆಂಕಿ ಬಿದ್ದ ಪರಿಣಾಮ ಸಕಲಬೇಣದ ರಾಮದಾಸ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ.
ಮನೆ ಹೊತ್ತಿ ಉರಿದ ಪರಿಣಾಮ ಆಭರಣ, ಹಣ ಹಾಗೂ ಮುಖ್ಯ ಕಾಗದ ಪತ್ರಗಳು ಸುಟ್ಟು ಬೂದಿಯಾಗಿದೆ. ಅವಘಡದ ವೇಳೆ ಸಕಲಬೇಣದ ರಾಮದಾಸ ನಾಯ್ಕ ಮತ್ತು ರಾಧಿಕಾ ದಂಪತಿ ಕೆಲಸಕ್ಕೆ ಹೋಗಿದ್ದರು.
ಬೆಂಕಿ ಬಿದ್ದ ಸುದ್ದಿ ಕೇಳಿ ಓಡೋಡಿ ಬಂದರು. ಅದಾಗಿಯೂ ಮನೆಯನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಎಲ್ಲವನ್ನು ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದ್ದು, ಆಶ್ರಯಕ್ಕಾಗಿ ಅಂಗಲಾಚುತ್ತಿದೆ. ಮನೆಯಲ್ಲಿದ್ದ ಪಾತ್ರೆ – ಬಟ್ಟೆಗಳು ಸಹ ಸುಟ್ಟು ಕರಕಲಾಗಿದೆ.





