ಕಾರವಾರ: ಗೋವಾ ಪಣಜಿಯ ಆಸ್ಕವಾಡದಲ್ಲಿ ಮಾಂಡ್ರೆಮ್ ಊರಿನ ಮುಖ್ಯಸ್ಥರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರು ಜನರನ್ನು ಗೋವಾ ಪೊಲೀಸರು ಕಾರವಾರದಲ್ಲಿ ಬಂಧಿಸಿದ್ದಾರೆ.
ಮoಡ್ರೆಮ್ನ ಅಸ್ಕವಾಡದಲ್ಲಿ ಅಪರಿಚಿತ ಮುಸುಕುಧಾರಿಗಳು ಬುಧವಾರ ಮಹೇಶ್ ಕೋನಾಡ್ಕರ್ ಮೇಲೆ ದಾಳಿ ನಡೆಸಿದ್ದರು. ಆ ಆರೋಪಿತರ ಪೈಕಿ ಆರು ಜನ ಕಾರವಾರದಲ್ಲಿ ಅಡಗಿಕೊಂಡಿದ್ದರು. ಉತ್ತರ ಗೋವಾ ಪೊಲೀಸರು ಶುಕ್ರವಾರ ಸಂಜೆ ಕಾರವಾರ ಆಗಮಿಸಿ ಅವರನ್ನು ಹುಡುಕಾಡಿದರು.
ಮಾಂಡ್ರೆಮ್ ಪೊಲೀಸರು ಪುಂಡಲೀಕ ಹರಿಜನ ಎಂಬಾತರನ್ನು ಬಂಧಿಸಿ ಅವರಿಂದ ಉಳಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಪಡೆದರು. ಪುಂಡಲೀಕ ನೀಡಿದ ಮಾಹಿತಿ ಆಧರಿಸಿ ಹಳೆ ಗೋವಾದ ವಿಶ್ವನಾಥ್ ಹರಿಜನ್, ಪೊರ್ವೊರಿಮ್ನ ಸುರೇಶ್ ನಾಯ್ಕ್, ಮೈನಾ-ಪಿಲರ್ನ್ನ ಸಾಯಿರಾಜ್ ಗೋವೆಕರ್, ಸೇಂಟ್ ಕ್ರೂಜ್ನ ಫ್ರಾಂಕಿ ನಾಡರ್, ಚೋರಾವ್ನ ಮನೀಶ್ ಹಡ್ಫಡ್ಕರ್ ಮತ್ತು ಪಂಜಿಮ್ನ ಉದ್ದೇಶ್ ಶೆಟ್ಟಿ ಎಂಬಾತರನ್ನು ಬಂಧಿಸಿದರು.




