ಯಲ್ಲಾಪುರ: ನಿದ್ರೆ ಮಂಪರಿನಲ್ಲಿ ಕ್ರೂಸರ್ ವಾಹನ ಓಡಿಸಿದ ಚಾಲಕನ ತಪ್ಪಿನಿಂದ ರಸ್ತೆ ಬದಿ ಮೂತ್ರ ವಿಸರ್ಜನೆಗೆ ನಿಂತಿದ್ದ ಇಬ್ಬರನ್ನು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಒಬ್ಬರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಎರಡು ವಾಹನಗಳು ಜಖಂ ಆಗಿದೆ.
ಕಿರವತ್ತಿಗಿಂತ 1ಕಿಮೀ ಹಿಂದೆ ಶನಿವಾರ ನಸುಕಿನ 4.15ಕ್ಕೆ ಬೆಳಗಾವಿಯ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಮೂತ್ರ ವಿಸರ್ಜನೆಗೆ ನಿಂತಿದ್ದರು. ಬಾಗಲಕೋಟೆಯ ಪ್ರಭು ಯಾದವಾಡ ಎಂಬಾತ ಹುಬ್ಬಳ್ಳಿ ಕಡೆಗೆ ಕ್ರೂಸರ್ ವಾಹನ ಓಡಿಸಿಕೊಂಡು ಹೊರಟಿದ್ದು ರಸ್ತೆ ಪಕ್ಕದಲ್ಲಿದ್ದ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಅವರಿಗೆ ಕ್ರೂಸರ್ ಗುದ್ದಿದ. ಅದಾದ ನಂತರ ಕ್ರೂಸರ್ ಅಲ್ಲಿದ್ದ ಬೈಕಿಗೆ ಡಿಕ್ಕಿಯಾಗಿ ಪಲ್ಟಿಯಾಯಿತು.
ವೇಗವಾಗಿ ಕ್ರೂಸರ್ ಚಾಲಕ ಮುದೋಳದ ಹನುಮಂತ ಹಲಗಲಿ ರಕ್ತಸ್ರಾವದಿಂದ ಅಲ್ಲಿಯೇ ಸಾವನಪ್ಪಿದರು. ಬೈಕಿನಲ್ಲಿ ಬಂದಿದ್ದ ತೇಜು ಕೊಡೆ ಹಾಗೂ ಲಕ್ಷಣ ರಾವುತ್ ಜೊತೆ ಕ್ರೂಸರ್ ವಾಹನದಲ್ಲಿದ್ದ ಬಾಗಲಕೋಟೆಯ ಬಸವರಾಜ ಕುಂಬಾರ, ಶಾಂತವ್ವ ಬಡಿಗೇರ, ಮುದೋಳದ ಬಸವರಾಜ ಹೂಗಾರ, ಕಾಳವ್ವ ಮಠಪತಿ, ವೆಂಕಟೇಶ ಚೌರೆಡ್ಡಿ ಸಹ ಈ ಅಪಘಾತದಲ್ಲಿ ಗಾಯಗೊಂಡರು.
ವಿಷಯ ತಿಳಿದ ಸಿಪಿಐ ರಮೇಶ ಹಾನಾಪುರ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದರು. ಪೊಲೀಸ್ ಉಪನಿರೀಕ್ಷಕರಾದ ಸಿದ್ದಪ್ಪ ಗುಡಿ, ಶೇಡಜಿ ಚೌಹಾಣ, ನಸ್ರೀನ್ತಾಜ್ ಚಟ್ಟರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಪಘಾತಕ್ಕೆ ಕಾರಣವಾದ ಕ್ರೂಸರ್ ಚಾಲಕ ಪ್ರಭು ಯಾದವಾಡ ಸಹ ಗಾಯಗೊಂಡಿದ್ದು, ಆತನ ವಿರುದ್ಧ ಬೈಕ್ ಸವಾರ ತೇಜು ಕೊಡೆ ಪೊಲೀಸ್ ದೂರು ದಾಖಲಿಸಿದರು.




