ಸಿದ್ದಾಪುರ: ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಕಿರಣ್ ಫರ್ನಾಂಡಿಸ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ವಾಸಿಸುವ ಕಿರಣ್ ಆಗ್ನೇಲ್ ಫರ್ನಾಂಡಿಸ್ ಅಲ್ಲಿಯೇ ಮಣ್ಣಿನ ಮಡಿಕೆ ಮಾರಾಟ ಮಾಡುತ್ತಾರೆ. ಇದರೊಂದಿಗೆ ಜೂಜಾಡಿಸುವುದು ಅವರ ಉಪಆದಾಯ. ಹೀಗಾಗಿ ಅವರು ಮಟ್ಕಾ ಆಡಿಸುತ್ತಿದ್ದರು.
ಡಿ 6ರಂದು ರಾತ್ರಿ 1ರೂಪಾಯಿಗೆ 80ರೂ ಕೊಡುವುದಾಗಿ ಜನರಿಂದ 750ರೂ ಹಣ ಸಂಗ್ರಹಿಸಿದ್ದರು. ಈ ವಿಷಯ ಅರಿತ ಪಿಎಸ್ಐ ಅನೀಲ ಮಾದರ ಮಣ್ಣಿನ ಮಡಿಕೆ ಮಳಿಗೆ ಮೇಲೆ ದಾಳಿ ನಡೆಸಿದರು. ಮಟ್ಕಾ ಚೀಟಿ ಜೊತೆ ಹಣ ಹಾಗೂ ಇನ್ನಿತರ ಪರಿಕ್ಕರಗಳನ್ನು ವಶಕ್ಕೆ ಪಡೆದರು.




