6
  • Latest

ಶಿರೂರು| ಸ್ವಾಮೀಜಿ ಹೇಳಿದ ಸ್ಪೋಟಕ ಸತ್ಯ: ಡ್ರೋಣ್ ಖರೀದಿಗಿಂತ ಬಾಡಿಗೆಯೇ ದುಬಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರೂರು| ಸ್ವಾಮೀಜಿ ಹೇಳಿದ ಸ್ಪೋಟಕ ಸತ್ಯ: ಡ್ರೋಣ್ ಖರೀದಿಗಿಂತ ಬಾಡಿಗೆಯೇ ದುಬಾರಿ!

AchyutKumar by AchyutKumar
December 9, 2024
in ರಾಜ್ಯ
advt advt advt
ADVERTISEMENT

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ಹಾಗೂ ಲೋಕೇಶ ಅವರ ಮರಣಪತ್ರ ಈವರೆಗೂ ಅವರ ಕುಟುಂಬಕ್ಕೆ ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ಆರ್ಯ ಈಡಿಗ ಮಹಾ ಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್‌ಎ ವರದಿ ಬಾರದಿರುವ ಬಗ್ಗೆಯೂ ಅವರು ಕಿಡಿಕಾರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು `ಶಿರೂರು ಗುಡ್ಡ ದುರಂತದಲ್ಲಿ 6 ದಿನದ ಊಟಕ್ಕಾಗಿ 3 ಲಕ್ಷ ರೂ ವೆಚ್ಚ ಮಾಡಲಾಗಿದೆ. ಡ್ರೋಣ್ ಹಾರಾಟಕ್ಕೆ 25 ಲಕ್ಷ ರೂ ವೆಚ್ಚವಾಗಿದೆ ಎಂಬ ಲೆಕ್ಕ ನೀಡಿದ್ದು, ಕಾರ್ಯಾಚರಣೆಯಲ್ಲಿ ಅವ್ಯವಹಾರ ನಡೆದಿದೆ’ ಎಂದು ದೂರಿದರು. `ಇದು ಕೇವಲ 6 ದಿನದ ವೆಚ್ಚದ ಮಾಹಿತಿಯಾಗಿದ್ದು, ಇನ್ನೂ 50 ದಿನದ ವೆಚ್ಚದ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಟ್ಟಿಲ್ಲ. ಎಲ್ಲಾ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT
ADVERTISEMENT

ಸ್ವಾಮೀಜಿ ಹೇಳಿದ್ದು ಸತ್ಯವಲ್ಲ!
ಡ್ರೋಣ್ ಬಳಕೆಗೆ 25 ಲಕ್ಷ ರೂ ವೆಚ್ಚವಾಗಿದೆ ಎಂದು ಸ್ವಾಮೀಜಿ ಸುದ್ದಿಗಾರರಿಗೆ ಹೇಳಿದ್ದು, ಅದು ಸತ್ಯವಲ್ಲ. ದಾಖಲೆಗಳಲ್ಲಿ 2.5 ಲಕ್ಷ ರೂ ವೆಚ್ಚವಾದ ಬಗ್ಗೆ ಮಾಹಿತಿಯಿದ್ದು, ಅದನ್ನು ತಪ್ಪಾಗಿ ಅರಿತ ಸ್ವಾಮೀಜಿ 25 ಲಕ್ಷ ಎಂದು ಹೇಳಿಕೆ ನೀಡಿದ್ದಾರೆ!

Advertisement. Scroll to continue reading.
Advertisement. Scroll to continue reading.

ಪೊಲೀಸರ ವಿರುದ್ಧ ಗರಂ!
`ಹೆದ್ದಾರಿ ಅಗಲೀಕರಣದಲ್ಲಿ ಲೋಪವೆಸಗಿದ IRB ಕಂಪನಿಯ 8 ಜನರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಅದಾಗಿಯೂ ಪೊಲೀಸರು ಒಂದು ಪ್ರಕರಣ ಮಾತ್ರ ದಾಖಲಿಸಿದ್ದು, 8 ಜನರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ರೀತಿ ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ನ್ಯಾಯಾಲಯಕ್ಕೆ ಹೇಳಿದ್ದು, IRB ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು. `ನಾನು ದಿನಕ್ಕೆ 15 ಬಾರಿ ಫೋನ್ ಮಾಡಿದರೂ ಪೊಲೀಸ್ ವರಿಷ್ಠಾಧಿಕಾರಿಗಳು ಫೋನ್ ಸ್ವೀಕರಿಸಲ್ಲ. ಅವರು ಐಆರ್‌ಬಿ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡ ಅನುಮಾನವಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

ಈ ಸ್ವಾಮೀಜಿ ತನಿಖಾಧಿಕಾರಿ
`ಸಿಕ್ಕಿದ ಮೂಳೆ ಮೇಲೆ ಕೆಮಿಕಲ್ ಸುರಿದವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಮಧು ಎಂಬ ವ್ಯಕ್ತಿ ಗೋವಾಗೆ ಬಂದರೆ ಪೊಲೀಸರ ವಾಹನ ತೆರಳಿ ಆತನನ್ನು ಕರೆದುಕೊಂಡು ಬರುತ್ತದೆ. ಆತ ಯಾರು? ಎಂದು ಎಲ್ಲರಿಗೂ ಗೊತ್ತಾಗಬೇಕು’ ಎಂದು ಆಗ್ರಹಿಸಿದರು. `ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ನವೀಕರಣ ಕೆಲಸದಲ್ಲಿಯೂ ಅವ್ಯವಹಾರ ನಡೆದಿದೆ. ಎಸ್ಪಿ ಕಚೇರಿ ಕಾಮಗಾರಿಗಳ ಬಗ್ಗೆಯೂ ತನಿಖೆ ಮಾಡಿಸುತ್ತೇವೆ’ ಎಂದು ಸವಾಲು ಹಾಕಿದರು. ದೇವರಾಜ ನಾಯ್ಕ, ಶ್ರೀಧರ ನಾಯ್ಕ, ದಾಮೋದರ ನಾಯ್ಕ, ರಾಜೇಶ ನಾಯ್ಕ, ಮನಿಷಾ, ವಿನೋದ ನಾಯ್ಕ, ಶ್ರೀನಿವಾಸ ನಾಯ್ಕ ಇತರರು ಇದ್ದರು.

ShareSendTweetShare
ADVERTISEMENT
Previous Post

ಯಕ್ಷ ರೂಪಕ ಕಂಡು ಭಾವುಕರಾದ ಚಿತ್ರನಟಿ: ತುಳಸಿ ನೃತ್ಯಕ್ಕೆ ಮನಸೋತ ಪೂಜಾ ಗಾಂಧಿ!

Next Post

ಬಾವಿಕೊಡ್ಲದ ಬಾವಿಯಲ್ಲಿ ರೇಣುಕಾಳ ಶವ!

Next Post

ಬಾವಿಕೊಡ್ಲದ ಬಾವಿಯಲ್ಲಿ ರೇಣುಕಾಳ ಶವ!

ವಾಂತಿಗೆ ಬೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.