ಯಲ್ಲಾಪುರ: ಸಹಸ್ರಳ್ಳಿಯ ವಿದ್ಯಾರ್ಥಿ ಅಭಿಷೇಕ ಮರಾಠಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಹಸ್ರಳ್ಳಿ ಗ್ರಾಮದ ರಾಮನಕೊಪ್ಪದಲ್ಲಿ ವಾಸವಾಗಿದ್ದ ಶ್ರೀಕಾಂತ ಮರಾಠಿ ಅವರ ಪುತ್ರ ಅಭಿಷೇಕ ಮರಾಠಿ (11 ವರ್ಷ) ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸೋಮವಾರ ಅಭಿಷೇಕ ಮರಾಠಿ ಮನೆಯಲ್ಲಿಯೇ ಇದ್ದರು. ದಿನವಿಡೀ ವಾಂತಿ ಆಗಿದ್ದರಿಂದ ತೀವೃ ಅಸ್ವಸ್ಥಗೊಂಡಿದ್ದರು.
ಸoಜೆ 4.30ಕ್ಕೆ ವಿಶ್ರಾಂತಿ ಪಡೆಯುತ್ತಿದ್ದ ಅಭಿಷೇಕ ಮರಾಠಿ 5 ಗಂಟೆ ಅವಧಿಯಲ್ಲಿ ಶವವಾಗಿದ್ದರು. ರಾಮನಕೊಪ್ಪದ ಮನೆಯಲ್ಲಿಯೇ ಅವರು ನಾರಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದರು.
ಅಭಿಷೇಕ ಅವರ ತಂದೆ ಶ್ರೀಕಾಂತ ಮರಾಠಿ ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.




