ಅಂಕೋಲಾ: ಶಿರೂರಿನ ರೇಣುಕಾ ಗೌಡ ಎಂಬಾತರು ಸೋಮವಾರ ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ.
ಮಾನಸಿಕ ಅಸ್ವಸ್ಥರಾಗಿದ್ದ ರೇಣುಕಾ ನಾರಾಯಣ ಗೌಡ (27) ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಾವಿಕೊಡ್ಲದ ದೊಡ್ಡಮ್ಮನ ಮನೆಯಲ್ಲಿ ಅವರಿಗೆ ಆರೈಕೆ ನಡೆದಿತ್ತು. ಸೋಮವಾರ ಅವರು ಬಾವಿಗೆ ಹಾರಿ ಸಾವನಪ್ಪಿದ್ದಾರೆ.
ನೇಣಿಗೆ ಶರಣಾದ ಮಹಿಳೆ
ಭಟ್ಕಳ: ತೆಂಗಿನಗುoಡಿ ಬಳಿಯ ಬೆಳಕೆ ಜಾಜಿಕೇರಿಮನೆಯಲ್ಲಿ ವಾಸವಾಗಿದ್ದ ಲೀಲಾವತಿ ನಾಯ್ಕ ಅವರು ನೇಣಿಗೆ ಶರಣಾಗಿದ್ದಾರೆ.
ಭಟ್ಕಳದ ತೆಂಗಿನಗುoಡಿಯವರಾಗಿದ್ದ ಲೀಲಾವತಿ ಉಮೇಶ ನಾಯ್ಕ (42) ಅವರು ಒಂದು ವರ್ಷದಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಭಾನುವಾರ ಅವರು ತಮ್ಮ ತವರು ಮನೆಯಲ್ಲಿ ಪ್ರಾಣ ಬಿಟ್ಟರು. ಏಣಿಯ ಗ್ರಿಲ್ಸ ಪೈಪಿಗೆ ನೇಣು ಹಾಕಿಕೊಂಡು ಅವರು ಸಾವನಪ್ಪಿದರು.




