ಯಲ್ಲಾಪುರ: ಪ್ರತಿ ವರ್ಷವೂ ವಿಭಿನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುತ್ತಿರುವ ಗುಳ್ಳಾಪುರದ ಯುವಕ ಸಂಘ ಈ ಬಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಪಟ್ಟಿ-ಪೆನ್ನು ಹಂಚಿಕೆ ಮಾಡಿದೆ. ಸೋಮವಾರ ಸಂಘದ ಕಟ್ಟಡದಲ್ಲಿ ಸತ್ಯನಾರಾಯಣ ಕಥೆ ನಡೆಸಿ ಅದರ ಪ್ರಸಾದದ ಜೊತೆ ಅಗತ್ಯ ಪರಿಕ್ಕರಗಳನ್ನು ಸಂಘದ ಸದಸ್ಯರು ಮಕ್ಕಳಿಗೆ ವಿತರಿಸಿದರು.
ಗುಳ್ಳಾಪುರದಲ್ಲಿನ ಚಾಮುಂಡೇಶ್ವರಿ ಚಾಮುಂಡೇಶ್ವರಿ ಯುವಕ ಸಂಘದವರು ಪ್ರತಿ ವರ್ಷವೂ ಒಂದಿಲ್ಲೊAದು ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದಾರೆ. ಕಳೆದ ವರ್ಷ ಹಿರಿಯ ನಾಗರಿಕರಿಗೆ ಗೌರವಿಸಿದ್ದರು. ಸಾಧಕರಿಗೆ ಸನ್ಮಾನಿಸಿದ್ದರು. ಅದಕ್ಕೂ ಮೊದಲು ಬಡವರಿಗೆ ಪಾತ್ರೆ-ಸಾಮಗ್ರಿಗಳನ್ನು ವಿತರಿಸಿದ್ದರು. ಮತ್ತೊಮ್ಮೆ ರೋಗಿಗಳಿಗೆ ಹಣ್ಣು-ಔಷಧಿ ವಿತರಿಸಿದ್ದರು. ಈ ಬಾರಿ ಗುಳ್ಳಾಪುರದ ರಾಮನಗರ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಗೆ ಅಗತ್ಯವಿರುವ ಪಟ್ಟಿ-ಪೆನ್ನು ಜೊತೆ ನೀತಿ ಕಥೆಗಳಿರುವ ಪುಸ್ತಕಗಳನ್ನು ಹಂಚಿದರು.
ಯುವಕ ಸಂಘದ ಈ ಕಾರ್ಯದ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಶೇರುಗಾರ ಸಂತಸ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಸಿದ್ದಿ, ಉಪಾಧ್ಯಕ್ಷ ಪ್ರಶಾಂತ ಪಟಗಾರ, ಕಾರ್ಯದರ್ಶಿ ಹನುಮಂತ ಕಾಂಬಳೆ, ಖಜಾಂಚಿ ಸಚಿನ್ ಹುಲ್ಲೂರು, ಸದಸ್ಯರಾದ ಪ್ರಶಾಂತ್ ಮಡಿವಾಳ, ನೂರಸಾಬ ಬೆಳವಂಕಿ, ಅರುಣ ಮಡಿವಾಳ, ನಿಲೇಶ್ ಯರಗಟ್ಟಿ. ಪವನ್ ಚವ್ಹಾಣ್, ದಯಾನಂದ ಸಿದ್ದಿ, ಚರಣ್ ರಾಜ್ ಹುಣಸೇಮರದ್, ರಾಮ ಸಿದ್ದಿ, ದರ್ಶನ ಸಿದ್ದಿ ಹಾಗೂ ಇಸ್ಮಾಯಿಲ್ ಹರ್ಡೇಕರ ಮಕ್ಕಳ ಜೊತೆ ಬೆರೆತರು.




