ಕಾರವಾರ: ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ಜಂತು ಹುಳುವಿನ ಮಾತ್ರ ನೀಡಲಾಗುತ್ತಿದೆ. `ಜ್ವರ ಅಥವಾ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರೆ ಸೇವಿಸದಿರುವುದು ಒಳಿತು’ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆಯಂತೆ ನಗೆ ಶಾಲೆಯಲ್ಲಿ `ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಿಸಲಾಯಿತು. ಎನ್ಡಿಡಿ ಕಾರ್ಯಕ್ರಮದ ಅನ್ವಯ ಮಕ್ಕಳಿಗೆ ಜಂತು ಹುಳು ಮಾತ್ರೆಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಖ್ತರ ಜೆ ಸೈಯದ್ ಜಂತು ಹುಳು ನಿವಾರಣಾ ದಿನದ ಮಹತ್ವ ತಿಳಿಸಿದರು. `19 ವರ್ಷದೊಳಗಿನ ಮಕ್ಕಳು ಜಂತು ಹುಳು ಕಾಟದಿಂದ ರಕ್ಷಿಸಿಕೊಳ್ಳಲು ಈ ಮಾತ್ರೆಯ ಪ್ರಯೋಜನ ಪಡೆಯಬೇಕು’ ಎಂದು ಅವರು ಕರೆ ನೀಡಿದರು.
ಸ್ಥಳೀಯ ಆರೋಗ್ಯ ಕಾರ್ಯಕರ್ತೆ ಮಾತನಾಡಿ `ಜ್ವರ ಹಾಗೂ ದೀರ್ಘ ಕಾಯಿಲೆಗಳಿದ್ದಲ್ಲಿ ಈ ಮಾತ್ರೆ ಸೇವಿಸುವುದು ಬೇಡ’ ಎಂಬ ಸಲಹೆ ನೀಡಿದರು. `ಈ ದಿನ ಗೈರಾದ ಮಕ್ಕಳಿಗೆ ಡಿ 16ರಂದು ಮಾತ್ರೆಗಳನ್ನು ನೀಡಲಾಗುತ್ತದೆ’ ಎಂದು ಸಹಶಿಕ್ಷಕಿ ಪ್ರಿಯಾ ಲಾಂಜೇಕರ ತಿಳಿಸಿದರು. ಶಾಲಾ ಅತಿಥಿ ಶಿಕ್ಷಕಿಯರಾದ ರೇಷ್ಮಾ ಹುಲಸ್ವಾರ, ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಇದ್ದರು.




