ಶಿರಸಿ: ಹೊಸನಗರದಲ್ಲಿ ಬೇಕರಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಶಿರಸಿ ಮೂಲದ ಜಿತೇಂದ್ರ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
33 ವರ್ಷದ ಜಿತೇಂದ್ರ ಮಹಾಬಲೇಶ್ವರ ನಾಯ್ಕ ಹೊಸ ನಗರದಲ್ಲಿ 5 ವರ್ಷಗಳಿಂದ ಬೇಕರಿ ನಡೆಸುತ್ತಿದ್ದರು. ತಮ್ಮ ಉದ್ದಿಮೆ ಹಾಗೂ ವೈಯಕ್ತಿಕ ಅಡಚಣೆಗಾಗಿ ವಿವಿಧ ಕಡೆ ಸಾಲ ಮಾಡಿಕೊಂಡಿದ್ದರು. ಆದರೆ, ಸಾಲದ ಹಣ ಮರುಪಾವತಿ ಸಾಧ್ಯವಾಗಿರಲಿಲ್ಲ.
ಮಂಗಳವಾರ ಸಾಗರದ ಬಸ್ ನಿಲ್ದಾಣದ ಬಳಿ ಲಾಡ್ಜ್ ಪ್ರವೇಶಿಸಿದ್ದರು. ಸಂಜೆ 4 ಗಂಟೆ ನಂತರ ಅವರು ಕೋಣೆಯಿಂದ ಹೊರ ಬರಲಿಲ್ಲ. ಅನುಮಾನದ ಹಿನ್ನಲೆ ವಸತಿಗೃಹದ ಬಾಗಿಲು ಒಡೆದು ಸಿಬ್ಬಂದಿ ಒಳ ಹೋದಾಗ ಜಿತೇಂದ್ರ ನಾಯ್ಕ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.




