ಯಲ್ಲಾಪುರ: ಮಂಜುನಾಥ ನಗರದ ಅಶೋಕೆ ದೋತ್ರೆ (38) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ.
ಬುಧವಾರ ಬೆಳಗ್ಗೆ ಮನೆಯಲ್ಲಿದ್ದ ಅವರು ಔಷಧಿ ಸೇವಿಸಿದ್ದರು. ಅದಾದ ನಂತರ ಅಸ್ವಸ್ಥಗೊಂಡ ಅಶೋಕ ದೋತ್ರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ಚೇತರಿಸಿಕೊಂಡ ಅವರು ಮನೆಗೆ ಮರಳಿದ್ದರು.
ಗುರುವಾರ ರಾತ್ರಿ 8 ಗಂಟೆಗೆ `ಕುಡಿಯಲು ಗಂಜಿ ಕೊಡು’ ಎಂದು ಅವರು ಹೇಳಿದ್ದರು. ಗಂಜಿ ಕೊಡುವುದರೊಳಗೆ ಕುಸಿದು ನೆಲಕ್ಕೆ ಬಿದ್ದರು. ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಅಶೋಕ ದೋತ್ರೆ ಅವರು ಸಾವನಪ್ಪಿರುವುದಾಗಿ ಹೇಳಿದರು.
ಅಶೋಕ ದೋತ್ರೆ ಅವರ ಶವವನ್ನು ಶವಾಗಾರದಲ್ಲಿರಿಸಲಾಗಿದೆ. `ಅವರ ಸಾವಿನಲ್ಲಿ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಶಿರಸಿ ಮಾರುತಿಗಲ್ಲಿಯ ಗೌಂಡಿ ಅಣ್ಣಪ್ಪ ದೋತ್ರೆ ದೂರು ನೀಡಿದ್ದಾರೆ.




