ಶಿರಸಿ: ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ ತುಗಲಿದ ಪರಿಣಾಮ ಸ್ಕೂಟಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಕೂಟಿಯಿಂದ ದೂರ ಸರಿದು ಜೀವ ಉಳಿಸಿಕೊಂಡಿದ್ದಾರೆ.
ಶಿರಸಿಯ ಹೆಗಡೆಕಟ್ಟಾ ಬಳಿಯಿರುವ ಗ್ಯಾರೇಜಿಗೆ ವಿನೋದಾ ಗೌಡ ಎಂಬಾತರು ಸ್ಕೂಟಿ ರಿಪೇರಿಗೆ ಕೊಟ್ಟಿದ್ದರು. ಸ್ಕೂಟಿ ಸರಿಯಾದ ಬಗ್ಗೆ ಖಚಿತಪಡಿಸಿಕೊಂಡ ಅವರು ಅದನ್ನು ಏರಿ ಪ್ರಯಾಣ ಬೆಳೆಸಿದ್ದರು. ಯಾಣ ಕ್ರಾಸಿಗಿಂತ ಸ್ವಲ್ಪ ಹಿಂದಿರುವ ದೇವನಮನೆ ಬಳಿ ಸ್ಕೂಟಿಯಿಂದ ಹೊಗೆ ಬರಲಾರಂಬಿಸಿತು.
ತಕ್ಷಣ ಸ್ಕೂಟಿಯನ್ನು ನಿಲ್ಲಿಸಿದ ವಿನೋದಾ ಗೌಡ ಅವರು ಪರಿಶೀಲಿಸುವಾಗ ಬೆಂಕಿ ಕಾಣಿಸಿತು. ತಕ್ಷಣ ಅವರು ಅಲ್ಲಿಂದ ದೂರ ಸರಿದರು. ಸ್ಥಳೀಯರಾದ ಅರವಿಂದ ಹೆಗಡೆ ದೇವಿನಮನೆ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನೆವಾಗಿಲ್ಲ. ಅದಾಗಲೇ ಸ್ಕೂಟಿ ಉರಿಯಲು ಶುರುವಾಗಿದ್ದು, ನಿಮಿಷಗಳು ಉರುಳುವುದರೊಳಗೆ ಸಂಪೂರ್ಣವಾಗಿ ಕರಕಲಾಯಿತು.




