6
  • Latest

ಬಳಸಿದ ವೈದ್ಯಕೀಯ ವಸ್ತು ಬಿಸಾಡಬೇಡಿ.. ದಾನ ಮಾಡಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಬಳಸಿದ ವೈದ್ಯಕೀಯ ವಸ್ತು ಬಿಸಾಡಬೇಡಿ.. ದಾನ ಮಾಡಿ!

AchyutKumar by AchyutKumar
in ಲೇಖನ

ವೀಲ್ ಚೇರ್, ವಾಟರ್ ಬೆಡ್, ವಾಕರ್ ಸೇರಿ ಬಳಕೆಯಲ್ಲಿ ಇಲ್ಲದ ವೈದ್ಯಕೀಯ ಉಪಕರಣಗಳು ನಿಮ್ಮಲ್ಲಿದ್ದರೆ ಅದನ್ನು ಬಿಸಾಡಬೇಡಿ. ಅದನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆಗೆ ಶಿರಸಿಯಲ್ಲಿ ಚಾಲನೆ ಸಿಕ್ಕಿದ್ದು, ನಿಮ್ಮಲ್ಲಿರುವ ಉಪಕರಣದ ಬಗ್ಗೆ ಅಲ್ಲಿನ ಡೈರಿಯಲ್ಲಿ ನಮೂದಿಸಿ.. ಅಗತ್ಯವಿದ್ದವರಿಗೆ ಆ ಉಪಕರಣ ತಲುಪಿಸಿ!

ADVERTISEMENT

ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಡಾ ರವಿಕಿರಣ ಪಟವರ್ಧನ ಅವರ ಆಯುರ್ವೇದ ಆಸ್ಪತ್ರೆಯಲ್ಲಿ `ಉಪಯೋಗಿಸಿ ಸುಸ್ಥಿತಿಯಲ್ಲಿಯ ವೈದ್ಯಕೀಯ ಸಲಕರಣೆ ಸಂಪರ್ಕ ಪಟ್ಟಿ’ಯನ್ನಿಡಲಾಗಿದೆ. ಯಾರೂ ಬೇಕಾದರು ಅಲ್ಲಿಗೆ ಬಂದು ತಮ್ಮ ಬಳಿಯಿರುವ ವೈದ್ಯಕೀಯ ಉಪಕರಣದ ಬಗ್ಗೆ ಬರೆಯಬಹುದು. ಹೆಸರು ಹಾಗೂ ಫೋನ್ ನಂ ನಮೂದಿಸುವುದು ಕಡ್ಡಾಯ. ಅಗತ್ಯವಿರುವವರು ಸಹ ಡೈರಿ ನೋಡಿ ಅಗತ್ಯವಿರುವ ಉಪಕರಣವನ್ನು ಪಡೆಯಬಹುದು. ಈ ಸೇವೆಗಾಗಿ ಯಾರೂ ಆಸ್ಪತ್ರೆಗೆ ಹಣ ನೀಡುವ ಅಗತ್ಯವಿಲ್ಲ.

ತೆಲಂಗ ಸಹ್ಯಾದ್ರಿ ಪ್ರೌಢಶಾಲೆಯ ಶಿಕ್ಷಕರಾಗಿದ್ದ ಆರ್ ವಿ ಹೆಗಡೆ ಅವರನ್ನು ಸ್ಮರಿಸಿ ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನದವರು ಇಂಥಹದೊAದು ಯೋಜನೆ ಶುರು ಮಾಡಿದ್ದಾರೆ. ತೆಲಂಗ ಸಹ್ಯಾದ್ರಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಧೀರ್ ಶಾನಭಾಗ ಅವರ ಬಳಿ ಹಿರಿಯರು ಉಪಯೋಗಿಸಿದ್ದ ವೀಲ್ ಚೇರ್’ನ್ನು ಅರ್ಹರಿಗೆ ತಲುಪಿಸುವುದಕ್ಕಾಗಿ ನೊಂದಾಯಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

Advertisement. Scroll to continue reading.

`ಕುಟುಂಬದವರ ಅನಾರೋಗ್ಯದ ವೇಳೆ ಖರೀದಿಸಿದ ವೈದ್ಯಕೀಯ ಸಲಕರಣೆಗಳು ನಂತರ ಉಪಯೋಗಕ್ಕೆ ಬರುವ ಸಾಧ್ಯತೆ ಕಡಿಮೆ. ಅಂಥವುಗಳನ್ನು ಅಗತ್ಯವಿದ್ದವರಿಗೆ ತಲುಪಿಸುವ ಉದ್ದೇಶದಿಂದ ಈ ಪರಿವಿಡಿ ರಚಿಸಲಾಗಿದೆ’ ಎಂದು ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನದ ಅಧ್ಯಕ್ಷೆ ರಕ್ಷಾ ಪಟವರ್ಧನ ತಿಳಿಸಿದರು. `ಸುಸ್ಥಿತಿಯಲ್ಲಿರುವ ಉಪಕರಣದ ಹೆಸರು, ಫೋನ್ ನಂ’ನ್ನು ಪುಸ್ತಕದಲ್ಲಿ ನಮೂದಿಸಿದರೆ ಆ ಕೆಲಸ ಮುಗಿಯಿತು. ಆ ಉಪಕರಣವನ್ನು ಎಲ್ಲಿಯೂ ತಲುಪಿಸಬೇಕಾಗಿಲ್ಲ. ಅಗತ್ಯವಿದ್ದವರು ಡೈರಿ ನೋಡಿ, ಫೋನ್ ಮಾಡಿ ಉಪಕರಣವನ್ನು ಪಡೆಯಲಿದ್ದಾರೆ’ ಎಂದವರು ವಿವರಿಸಿದರು.

Advertisement. Scroll to continue reading.

`ಅಗತ್ಯವಿದ್ದವರು ಆಸ್ಪತ್ರೆ ಸಮಯದಲ್ಲಿ ಬಂದು ಲಭ್ಯ ಉಪಕರಣದ ಮಾಹಿತಿ ಪಡೆಯಬಹುದು. ಫೋನ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಗಳಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಉಪಕರಣ ಅವಶ್ಯವಿರುವ ರೋಗಿಗಳಿಗೆ ಸಲಕರಣೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ’ ಎಂದವರು ಹೇಳಿದರು.

Previous Post

ಬನವಾಸಿ ನಂದಿಗೆ ಕೇಂದ್ರದ ಶ್ರೀರಕ್ಷೆ!

Next Post

ಯಕ್ಷಗಾನದ ಅಕ್ಷರಾಭ್ಯಾಸ: ಹಳೆ ನೆನೆಪು.. ಹೊಸ ಹುರುಪು!

Next Post
Yakshagana Abhraabhyas Old memory.. New vitality!

ಯಕ್ಷಗಾನದ ಅಕ್ಷರಾಭ್ಯಾಸ: ಹಳೆ ನೆನೆಪು.. ಹೊಸ ಹುರುಪು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ