6
  • Latest

ಕಾಂಗ್ರೆಸ್ ಕಟ್ಟಾಳುವಿಗೆ ಲೈಂಗಿಕ ಕಿರುಕುಳದ ಬೆದರಿಕೆ | 15 ಲಕ್ಷ ರೂ ವಂಚನೆ: 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಂಗ್ರೆಸ್ ಕಟ್ಟಾಳುವಿಗೆ ಲೈಂಗಿಕ ಕಿರುಕುಳದ ಬೆದರಿಕೆ | 15 ಲಕ್ಷ ರೂ ವಂಚನೆ: 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್!

AchyutKumar by AchyutKumar
in ಸ್ಥಳೀಯ

ಕಾಂಗ್ರೆಸ್ ಮುಖಂಡ, ಉದ್ಯಮಿ, ಸಾಮಾಜಿಕ ಹೋರಾಟಗಾರ ಯಶೋಧರ ನಾಯ್ಕ ಅವರನ್ನು ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡುವುದಾಗಿ ಬೆದರಿಸಿದ್ದಾರೆ. ಶ್ರೀ ಯಶೋಧರ ನಾಯ್ಕ ಟ್ರಸ್ಟಿನ ಮೂಲಕ 15 ಲಕ್ಷ ರೂ ಲಪಟಾಯಿಸಿದ ಆ ಮಹಿಳೆ ಮತ್ತೆ 25 ಲಕ್ಷ ರೂ ಕೊಡುವಂತೆ ಬೇಡಿಕೆಯಿಟ್ಟಿದ್ದು, ಇದರಿಂದ ತಲೆಕೆಟ್ಟ ಯಶೋಧರ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ!

ಕುಮಟಾದ ಯಶೋಧರ ನಾಯ್ಕ ಅವರು ಯಶೋಧರ ನಾಯ್ಕ ಟ್ರಸ್ಟ್ ನಡೆಸುತ್ತಾರೆ. ಬ್ಯಾಂಕ್ ಸಹಯೋಗದಲ್ಲಿ ಅವರು ಸ್ವ ಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುತ್ತಾರೆ. ಹಲವು ಮಹಿಳೆಯರಿಗೆ ಅವರು ತಮ್ಮ ಟ್ರಸ್ಟಿನ ಮೂಲಕ ಉದ್ಯೋಗ ನೀಡಿದ್ದಾರೆ. ಇದರೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ರಾಜಕೀಯವಾಗಿಯೂ ಪ್ರಭಾವ ಹೊಂದಿದ್ದಾರೆ. ಈ ಹಿಂದೆ ಭಟ್ಕಳ ಹಾಗೂ ಕುಮಟಾ ಕ್ಷೇತ್ರ ಪ್ರತಿನಿಧಿಸಿ ಅವರು ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯನ್ನು ಸಹ ಎದುರಿಸಿದ್ದರು.

ಯಶೋಧರ ನಾಯ್ಕ ಟ್ರಸ್ಟಿನಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಇಂದಿರಾನಗರದ ಮುಸ್ಕಾನ್ ಮುಕಂದರ್ ಎಂಬಾತರು ಟ್ರಸ್ಟಿನ ಎಲ್ಲಾ ವ್ಯವಹಾರಗಳನ್ನು ಅರಿತಿದ್ದರು. ಸ್ವ ಸಹಾಯ ಸಂಘದವರು ಮರುಪಾವತಿ ಮಾಡಿದ 15 ಲಕ್ಷ ರೂ ಹಣವನ್ನು ಬ್ಯಾಂಕಿಗೆ ತುಂಬಿರಲಿಲ್ಲ. ಆ ಹಣವನ್ನು ಸ್ವಂತ ಬಳಕೆಗೆ ಉಪಯೋಗಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದರು. ಇದರಿಂದ ಟ್ರಸ್ಟ್ ಜೊತೆ ಟ್ರಸ್ಟಿನ ಅಡಿ ಬರುವ ಸ್ವ ಸಹಾಯ ಸಂಘದವರಿಗೆ ಸಹ ಹಾನಿಯಾಗಿತ್ತು.

ಈ ಬಗ್ಗೆ ಪ್ರಶ್ನಿಸಿದಾಗ ಯಶೋಧರ ನಾಯ್ಕ ಅವರಿಗೆ ಮುಸ್ಕಾನ್ ಬೆದರಿಸಿದ್ದು, ಆಕೆಯ ಅಣ್ಣ ಮೀರಾಸಾಬ್ ಮುಕಂದರ್ ಮೂಲಕ 25 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಬಂದಿತ್ತು. `ಈ ಹಣ ನೀಡದೇ ಇದ್ದರೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ ಮಾನ ಹರಾಜು ಹಾಕುವೆ’ ಎಂದು ಸಹ ಮುಸ್ಕನ್ ಹೆದರಿಸಿದ್ದರು. `ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ಕೋಟು-ಕಚೇರಿ ಅಲೆದಾಡಿಸುವೆ’ ಎಂದು ಸಹ ಮುಸ್ಕನ್ ಹೇಳಿದ್ದು, ಇದರಿಂದ ಬೆದರಿದ ಯಶೋಧರ ನಾಯ್ಕ ಅವರು ತಾವೇ ಮೊದಲಾಗಿ ಪೊಲೀಸ್ ದೂರು ನೀಡಿದ್ದಾರೆ. ಮುಸ್ಕನ್ ಹಾಗೂ ಮೀರಾಸಾಬ್ ಸೇರಿ ತನ್ನನ್ನು ಕೊಚ್ಚಿ ಕೊಲೆ ಮಾಡುವುದಾಗಿ ಹೇಳಿರುವ ಬಗ್ಗೆಯೂ ಅವರು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಯಶೋಧರ ನಾಯ್ಕ ಅವರ ದೂರು ಸ್ವೀಕರಿಸಿದ ಪೊಲೀಸರು ವಂಚಕಿ ಮುಸ್ಕನ್ ಹಾಗೂ ಆಕೆಯ ಅಣ್ಣ ಮೀರಾಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
Previous Post

ಮನೆ ಮಂದಿಯನ್ನು ಕಾಡಿದ ಕಾಡಿನ ಶವ!

Next Post

ಅದೇ ಊರು.. ಅದೇ ದಾರಿ: ಮತ್ತೊಂದು ಅಪಘಾತ!

Next Post

ಅದೇ ಊರು.. ಅದೇ ದಾರಿ: ಮತ್ತೊಂದು ಅಪಘಾತ!

ಯಲ್ಲಾಪುರದ ಡಾನ್'ಗಾಗಿ ಪೊಲೀಸರ ಹುಡುಕಾಟ!

ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.