10 ಜನರ ಸಾವಿಗೆ ಕಾರಣವಾದ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಗುರುವಾರ ಮತ್ತೊಂದು ಅಪಘಾತ ನಡೆದಿದೆ. ಎರಡು ಲಾರಿಗಳ ನಡುವೆ ಐಷಾರಾಮಿ ಕಾರು ಸಿಕ್ಕಿ ಬಿದ್ದಿದ್ದರಿಂದ ಕಾರಿನಲ್ಲಿದ್ದವರು ಆಸ್ಪತ್ರೆ ಸೇರಿದ್ದಾರೆ!
ಬೆಳಗಾವಿಯ ಬಸವರಾಜ ಅವರು ಮುರುಡೇಶ್ವರದ ಕಡೆ ಕಾರಿನಲ್ಲಿ ಹೋಗುತ್ತಿದ್ದರು. ಅರಬೈಲ್ ಪ್ರದೇಶದಲ್ಲಿ ಅವರ ಕಾರು ಎರಡು ಲಾರಿಗಳ ನಡುವೆ ಸಿಲುಕಿ ನುಜ್ಜು ನೂರಾಯಿತು. ಆ ಕ್ಷಣಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿoದ ಒಳಗಿದ್ದ ಎಲ್ಲರೂ ಆ ಕಾಲಕ್ಕೆ ಜೀವ ಉಳಿಸಿಕೊಂಡರು. ಅದಾಗಿಯೂ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಕಾರಿನಲ್ಲಿದ್ದ 1 ವರ್ಷದ ಮಗು ಶಶಿಕಾ ಸೇರಿ ಎಲ್ಲರಿಗೂ ಈ ಅಪಘಾತದಲ್ಲಿ ಗಾಯವಾಗಿದೆ. ಒಬ್ಬರು ಕಾಲು ಮುರಿದುಕೊಂಡಿದ್ದಾರೆ. ಶೋಭಾ, ಪೂರ್ಣಿಮಾ, ಸಾವಿತ್ರಿ, ಸಂಗಯ್ಯ ಹಾಗೂ ಕಾರು ಓಡಿಸುತ್ತಿದ್ದ ಬಸವರಾಜ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ನಿಂತಿರುವಾಗ ಹಿಂದಿನಿoದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಮುಂದೆ ನಿಲ್ಲಿಸಿದ್ದ ಇನ್ನೊಂದು ಲಾರಿಗೆ ಕಾರು ಗುದ್ದಿದೆ. ಪರಿಣಾಮ ಎರಡು ಲಾರಿ ನಡುವೆ ಸಿಲುಕಿ ಕಾರು ಜಖಂ ಆಗಿದೆ.




