ಕಳೆದ ಒಂದು ವರ್ಷದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಾದೇವ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಟ್ಕಳದ ಬೈಲೂರಿನ ತುಂಬೇಬೀಳುವಿನಲ್ಲಿ ಮಾದೇವ ನಾಯ್ಕ (55) ವಾಸಿಸುತ್ತಿದ್ದರು. ದಿನವಿಡೀ ಮನೆ ಕೆಲಸ ಮಾಡಿಕೊಂಡು ಅವರು ಆರೋಗ್ಯವಾಗಿಯೇ ಇದ್ದರು. ಹೀಗಿರುವಾಗ ಕಳೆದ ವರ್ಷ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು. ಪರೀಕ್ಷಿಸಿದಾಗ ಹೃದಯ ಸಮಸ್ಯೆಯಿರುವುದು ಗೊತ್ತಾಯಿತು.
ಹೃದಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಮಾದೇವ ನಾಯ್ಕ ಅವರಿಗೆ ಸಮಾಧಾನವಿರಲಿಲ್ಲ. ನೋವಿನಲ್ಲಿ ಅವರು ಸದಾ ಕೊರಗುತ್ತಿದ್ದರು. ಜನವರಿ 24ರಂದು ಸಹ ಅವರಿಗೆ ಎದೆ ನೋವು ಕಾಣಿಸಿತು. ಆ ನೋವನ್ನು ಸಹಿಸಿಕೊಳ್ಳಲು ಆಗದೇ ಅವರು ಮನೆಯೊಳಗಿನ ಕೋಣೆಯಲ್ಲಿ ನೇಣು ಹಾಕಿಕೊಂಡರು.
ತAದೆಯ ಸಾವಿನ ಬಗ್ಗೆ ಚಾಲಕ ಗಣೇಶ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಮುರುಡೇಶ್ವರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.




