ರಸ್ತೆ ಪಕ್ಕ ನಿಲ್ಲಿಸಿದ್ದ ವೀರಭದ್ರ ಬೋಗುರಕರ ಅವರ ಬೈಕ್ ಕಾಣೆಯಾಗಿದೆ. ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
ಹಳಿಯಾಳದ ಕಾಳಗಿನಕೊಪ್ಪದ ವೀರಭದ್ರ ಬೋಗುರಕರ (27) ವ್ಯಾಪಾರಿ. ಜನವರಿ 22ರಂದು ಅವರು ಮಲವಡಿ ಗ್ರಾಮದ ಬಳಿ ಎತ್ತುಗಳನ್ನು ನೋಡಿ ಬರಲು ಹೋಗಿದ್ದರು.
ಅಂದು ಬೆಳಗ್ಗೆ 8 ಗಂಟೆಗೆ ಗೋಲೆಹಳ್ಳಿಯ ಮಲವಡಿಗೆ ಬರುವ ರಸ್ತೆ ಪಕ್ಕದ ಅರಣ್ಯದಲ್ಲಿ ಬೈಕ್ ನಿಲ್ಲಿಸಿದ್ದರು. ಹ್ಯಾಂಡ್ ಲಾಕ್ ಮಾಡಲು ಮರೆತಿದ್ದರು. ಸಂಜೆ 6.30ಕ್ಕೆ ಬಂದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ.
ಇದರಿಂದ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದು, ಪೊಲೀಸರು ಬೈಕ್ ಹುಡುಕುತ್ತಿದ್ದಾರೆ.




