ವೇಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ತಿರುವಿನಲ್ಲಿ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಬಸ್ಸು ಧರಗೆ ಗುದ್ದಿದೆ.
ಭಾನುವಾರ ಸಾಗರದಿಂದ ಹೊರಟ ಬಸ್ಸು ಹೊನ್ನಾವರಕ್ಕೆ ಬರಬೇಕಿತ್ತು. ಆದರೆ, ಸುಳೆಮುರ್ಕಿ ತಿರುವಿನಲ್ಲಿ ಬಸ್ಸು ಅಪಘಾತಕ್ಕೀಡಾಯಿತು. ಬಸ್ಸಿನಲ್ಲಿ 49 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್ಸು ಗಟಾರಕ್ಕೆ ತೆರಳಿ ಅಲ್ಲಿ ಕೆಲ ದೂರ ಚಲಿಸಿತು. ಅದಾದ ನಂತರ ಗುಡ್ಡಕ್ಕೆ ಗುದ್ದಿ ಅಲ್ಲಿಯೇ ನಿಂತುಕೊAಡಿತು. ಬಸ್ ಅಪಘಾತದಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ನಿಗಮದ ಅಧಿಕಾರಿಗಳು ಸ್ಥಳ ಭೇಟಿ ನಡೆಸಿದ್ದಾರೆ.





