ಶಿರಸಿಯ ಬನವಾಸಿ ಹಾಗೂ ಮಳಲಗಾವಿನಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆಗೆ ಬಂದವರ ಬೈಕ್ ಕಳ್ಳತನವಾಗಿದೆ. ಬೈಕ್ ಕಳೆದುಕೊಂಡು ಮನೆಗೆ ಹೋಗಲು ತೊಂದರೆ ಅನುಭವಿಸಿದ ಇಬ್ಬರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ದಾಸನಕೊಪ್ಪದ ಲಪಗುಡ್ಡೆಯ ಸಂತೋಷ ದಡ್ಡಿಕೊಪ್ಪ ಹಾಗೂ ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಅವರು ದನ ಬೆದರಿಸುವ ಸ್ಪರ್ಧೆಗೆ ಹೋಗಿ ಬೈಕ್ ಕಳೆದುಕೊಂಡಿದ್ದಾರೆ. ಫೆ 23ರಂದು ದನಗನಹಳ್ಳಿಯಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆ ನೋಡಲು ಸಂತೋಷ ದಡ್ಡಿಕೊಪ್ಪ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವುದಕ್ಕಾಗಿ ಅವರು ಅಲ್ಲಿಂದ ಹೊರ ಬಂದರು. ಆದರೆ, ಅವರು ನಿಲ್ಲಿಸಿದ ಜಾಗದಲ್ಲಿ ಬೈಕ್ ಇರಲಿಲ್ಲ.
ಅಲ್ಲಿ-ಇಲ್ಲಿ ಹುಡುಕಾಡಿದರೂ ಅವರ ಬೈಕ್ ಸಿಗಲಿಲ್ಲ. ಹೀಗಾಗಿ ಅವರು ಆ ದಿನ ಮನೆಗೆ ಹೋಗಲು ಸಮಸ್ಯೆ ಅನುಭವಿಸಿದರು. ಕೊನೆಗೆ ಅವರಿವರ ಕೈ-ಕಾಲು ಹಿಡಿದು ಬೇರೆ ವಾಹನದ ಮೂಲಕ ಮನೆ ಸೇರಿದರು. ಅದರಂತೆ, ಮುಂಡಗೋಡ ಅಟ್ಟಬೈಲಿನ ಹನುಮಂತ ಕಡಗೋಡ ಸಹ ಫೆ 26ರಂದು ಮಳಲಗಾವ್ ಗ್ರಾಮದಲ್ಲಿ ನಡೆದ ದನ ಬೆದರಿಸುವ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಅವರು ಅಲ್ಲಿಯೇ ಇದ್ದರು. ಕೊನೆಗೆ ಅಲ್ಲಿಂದ ಹೊರ ಬಂದು ನೋಡಿದಾಗ ಬೈಕ್ ಕಾಣಲಿಲ್ಲ.
ಹೀಗಾಗಿ ಹನುಮಂತ ಕಡಗೋಡ ಅವರು ಮುಂಡಗೋಡಿಗೆ ಹೋಗಲು ಸಮಸ್ಯೆ ಅನುಭವಿಸಿದರು. ಜೊತೆಗೆ ತಮ್ಮ ಬೈಕ್ ಕಾಣೆಯಾದ ಬಗ್ಗೆಯೂ ತಲೆಬಿಸಿ ಮಾಡಿಕೊಂಡರು. ಬೈಕ್ ಹುಡುಕಾಟ ನಡೆಸಿದರೂ ಸಿಗದ ಕಾರಣ ಅವರು ಪೊಲೀಸರ ಮೊರೆ ಹೋದರು. ಸದ್ಯ ಈ ಎರಡು ಪ್ರಕರಣ ದಾಖಲಿಸಿಕೊಂಡಿರುವ ಬನವಾಸಿ ಠಾಣೆಯ ಪೊಲೀಸರು ಬೈಕ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ.




