ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯತಾಣವಾದ ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರವಾರ ಸಿಎನ್ಸಿ ಅಪರಾಧ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಬಿ ಅಶ್ವಿನಿ ನೇತ್ರತ್ವದಲ್ಲಿ ಹೈ ಲ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಬಿ ಅಶ್ವಿನಿ ಅವರ ಪೌರುಷಕ್ಕೆ ಬೆದರಿದ ಕಾಳಿ (ಹೆಸರು ಬದಲಾಯಿಸಲಾಗಿದೆ) ಎಂಬ ಸಂತ್ರಸ್ತ ಮಹಿಳೆ ಸಹ ತಮ್ಮ ಬ್ಯಾಗು-ಬಟ್ಟೆ ಬಿಟ್ಟು ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾರೆ. ಗಡಿಬಿಡಿಯಲ್ಲಿ ತಪ್ಪಿಸಿಕೊಳ್ಳಲು ಜಾಗವಿಲ್ಲದೇ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ!
ಮೈ ಮಾರಾಟ ದಂದೆಯಲ್ಲಿ ಸಕ್ರೀಯವಾಗಿದ್ದ ಸಿದ್ದಾಪುರ ದೊಡ್ಡಮನೆಯ ಮೋಹನ ಮಾಬ್ಲು ಗೌಡ ಹಾಗೂ ಶಿವಮೊಗ್ಗ ಸೊರಬದ ಶಿವಕುಮರ ಬಂಗಾರಪ್ಪ ನಾಯ್ಕ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುರುಡೇಶ್ವರ ಶೆಟ್ಟರಕೇರಿಯ ಈಶ್ವರ ಶನಿಯಾರ ನಾಯ್ಕ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. ಚಿತ್ರದುರ್ಗದ ಮಹಿಳೆಯ ಅಸಹಯಕತೆ ಅರಿತ ದುಷ್ಟರು ಆಕೆಯನ್ನು ಲಾಡ್ಜಿಗೆ ಕರೆಯಿಸಿಕೊಂಡಿದ್ದರು. ಆಕೆಯನ್ನು ಮುಂದೆ ಮಾಡಿ ಲೈಂಗಿಕ ಶೋಷಣೆ ನಡೆಸುತ್ತಿದ್ದರು. ವೇಶ್ಯಾವಾಟಿಕೆ ನಡೆಸಿದ್ದರಿಂದ ಬಂದ ಹಣವನ್ನು ದುಷ್ಟರು ಹಂಚಿಕೊಳ್ಳುತ್ತಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯದಿಂದ ಸಿಡಿದೆದ್ದ ಪೊಲೀಸ್ ಉಪಾಧೀಕ್ಷಕಿ ಬಿ ಅಶ್ವಿನಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಾಳಿ ನಡೆಸಿದರು. ತಮ್ಮ ತಂಡದೊ0ದಿಗೆ ವಿಶೇಷ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದ ಅವರು ಪುಣ್ಯಕ್ಷೇತ್ರದಲ್ಲಿ ನಡೆಯುತ್ತಿದ್ದ ಪಾಪದ ಕೆಲಸಕ್ಕೆ ಕಡಿವಾಣ ಹಾಕಿದರು. ಸೋಮವಾರ ಮುಂಜಾನೆಯ ಪೊಲೀಸ್ ಅಧಿಕೃತ ಮಾಹಿತಿ ಪ್ರಕಾರ ಅಧಿಕೃತವಾಗಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಇನ್ನುಳಿದವರ ವಿಚಾರೆಣೆ ನಡೆಯುತ್ತಿದ್ದು, ಬಂಧಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.




