ಹೊನ್ನಾವರ: ರೈಲು ಹಳಿ ಮೇಲೆ ನಡೆದು ಹೋಗುತ್ತಿದ್ದ ಗುಣವಂತೆಯ ಗಣಪಿ ಗಣಪಯ್ಯ ಗೌಡ (70) ಎಂಬಾತರಿಗೆ ಮುಂಬೈಯಿoದ ಮಂಗಳೂರಿಗೆ ಚಲಿಸುತ್ತಿದ್ದ ರೈಲು ಗುದ್ದಿದೆ. ಪರಿಣಾಮ ಅವರು ಛಿದ್ರಗೊಂಡು ಸಾವನಪ್ಪಿದ್ದಾರೆ.
ಗಣಪಿ ಗೌಡ ಮಾನಸಿಕವಾಗಿ ನೊಂದಿದ್ದರು. ಇದರಿಂದ ಎಲ್ಲೆಂದರಲ್ಲಿ ತಿರುಗುತ್ತಿದ್ದರು. ಅವರು ಮನೆಗೂ ಸರಿಯಾಗಿ ಬರುತ್ತಿರಲಿಲ್ಲ. ಅವರ ಮನೆಯವರು ಊರೆಲ್ಲ ಹುಡುಕಿ ಅವರನ್ನು ಮನೆಗೆ ತರುತ್ತಿದ್ದರು. ಹೀಗಿರುವಾಗ ಸೆ 1ರಂದು ಸಹ ಗಣಪಿ ಗೌಡ ಮನೆಯಿಂದ ಹೊರ ಹೋಗಿದ್ದು, ಮಧ್ಯಾಹ್ನ ಭಂಡಾರಕೇರಿಯಲ್ಲಿ ಹಾದು ಹೋದ ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದರು. ಹೊನ್ನಾವರದಿಂದ ಮಂಗಳೂರು ಕಡೆಗೆ ಹೊರಟ ರೈಲು ಅವರಿಗೆ ಗುದ್ದಿ ಸ್ಥಳದಲ್ಲಿಯೇ ಅವರು ಸಾವನಪ್ಪಿದರು.




