ಹಳಿಯಾಳ: ದೇಶಪಾಂಡೆ ನಗರದ ಅಭಿಷೇಕ ತಿಮ್ಮಣ್ಣ ಕುರ್ತಕೋಟಿ (20) ಎಂಬಾತ ಸ್ನಾನಕ್ಕೆ ಹೋದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆ ಸೇರಿಸುವ ಮುನ್ನ ಸಾವನಪ್ಪಿದ್ದಾನೆ.
ಧಾರವಾಡದಲ್ಲಿ ವಾಸವಾಗಿದ್ದ ಈತ ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಆಗಾಗ ಸರಾಯಿ ಕುಡಿಯುವ ಚಟವನ್ನು ಹೊಂದಿದ್ದ. ಸೆ 1ರಂದು ಊರಿಗೆ ಬಂದಿದ್ದ ಆತ ಮಧ್ಯಾಹ್ನ ಸ್ನಾನಕ್ಕೆ ಹೋಗಿದ್ದು, ಅಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ನಂತರ ಉಸಿರುಕಟ್ಟಿದ ಅನುಭವವಾಗಿ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಮನೆಯವರು ಆತನನ್ನು ಹಳಿಯಾಳ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದ್ದು, ಆಸ್ಪತ್ರೆ ಸೇರುವ ಮುನ್ನವೇ ಆತ ಸಾವನಪ್ಪಿದ್ದಾನೆ.




