ಕಾರವಾರ: ಗೋಪಿಶಟ್ಟಾ ಅರಣ್ಯ ವಲಯದಲ್ಲಿದ್ದ ಚಿರತೆ ಬೀದಿ ನಾಯಿ ಭಕ್ಷಿಸುವ ಆಸೆಯಿಂದ ಊರಿಗೆ ಪ್ರವೇಶಿಸಿದ್ದು, ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದೆ.
ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದಕ್ಕೆ ಚಿರತೆ ಗುರಿ ಹಾಕಿ ಆ ನಾಯಿಯನ್ನು ಅಟ್ಟಿಸಿಕೊಂಡು ಬಂದಿದೆ. ಹೀಗೆ ಬರುವಾಗ ನಾಯಿ ತಪ್ಪಿಸಿಕೊಂಡಿದ್ದು, ಚಿರತೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದೆ. ಬಾವಿಯ ನೀರು ತರಲು ಹೋದ ಮನೆಯವರಿಗೆ ಚಿರತೆಯ ಶವ ಕಾಣಿಸಿದ್ದು, ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.
ಜರಡಿ ಗ್ರಾಮದ ರಮೇಶ ಗೋವೇಕರ್ ಅವರ ತೆರೆದ ಬಾವಿಯಲ್ಲಿದ್ದ ಚಿರತೆಯ ಶವವನ್ನು ಅರಣ್ಯಾಧಿಕಾರಿಗಳು ಮೇಲೆತ್ತಿದರು. ನೆಲಕ್ಕೆ ಸಮಾನಾಂತರವಾಗಿ ಬಾವಿ ಇದ್ದ ಕಾರಣ ಅದರಲ್ಲಿ ಚಿರತೆ ಎಡವಿ ಬಿದ್ದಿದೆ. ಪಶು ವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.




